Sunday, 28 April 2013


ಇವ ಸುಮ್ನೇ ಗೀಚ್ತಾನೆ, ಸೀರಿಯಸ್ ಆಗ್ಬೇಡಿ…

ಅದೊಂದು ಕಾಲವಿತ್ತು. ಗುರುಗಳು ಎಂದರೆ ಸಾ
ಕ್ಷಾತ್ ದೇವರೇ ಎಂಬ ಭಾವನೆ ಜನರಲ್ಲಿತ್ತು. ’ಹರ ಮುನಿದರೂ ಗುರು ಕಾಯ್ವನು’ ಎಂಬಾ ನಂಬುಗೆಯಿತ್ತು. ಮೇಲಾಗಿ ಗೌರವವಿತ್ತು, ಆದರವಿತ್ತು. ಆದರೆ,,, ಕಾಲ ಬದಲಾಯ್ತೋ, ಜನರೇ ಚೇಂಜ್ ಆದ್ರೋ ಗೊತ್ತಾಗ್ಲಿಲ್ಲಾ, ಗುರು ಅನ್ನೋ ಪದವೇ ಇಂದು ಏನೇನೋ ಆಗೊಗಿದೆ. "ಬಾ ಗುರು’, "ತೊಗೋ ಗುರು", "ಮಗಾ ಹೊಡಿ ಗುರು" ಮುಂತಾದ ಪದಗಳನ್ನ ನಿಮ್ಮಾ ಆಸುಪಾಸಲ್ಲಿ ಕೇಳದ ಕಿವಿಗಳಿದ್ರೆ,  ಅದಕ್ಕೆರಡು ಲೀಟರ್ ಚಿಮಣಿ ಎಣ್ಣೆ ಹಾಕಿಸಿ ಕಿಲಿನು ಮಾಡಿಸಿ, ಪುಣ್ಯ ಕಟ್ಕಳಿ. ವಿದ್ಯಾ ಗುರುಗಳನ್ನೂ ಅವನು ಇವನು ಅಂತಾ ಮಾತಾಡಿಸೋ ವಿಧ್ಯಾರ್ಥಿಗಳಿಗೇನು ನಮ್ಮಲ್ಲಿ ಬರವೇ?
ಸರಿ ಪದಗಳನ್ನೇನೋ ಗಬ್ಬೇಬ್ಬಿಸಿದ್ದಾಯು,,! ಇನ್ನು ಗುರುವಿನ ಅರ್ಥವಾದರೂ ಅರ್ಥಬದ್ಧವಾಗಿ ಅರ್ಥವಾಗೋತರ ಇದೆಯಾ ಅಂತ ನೋಡಿದರೆ ಅಲ್ಲೂ ಕೂಡಾ ಅರ್ಥ ಅನರ್ಥವಾಗಿ ಅಪಾರ್ಥದ ಪಾತ್ರದೊಳU, ಪತ್ತರದ ಏಟು ತಿಂದ ಪತಂಗದ ತರ ಪತಪತಾ ಅಂತ ಬಿದ್ದು ಒದ್ದಾಡುವುದ ನೋಡಿದ ಕಣ್ಣುಗುಡ್ಡೆಗಳೂ ಸಹ ಜಿಗುಪ್ಸೆಗೊಂಡು ದಯಾಮರಣಕ್ಕೆ ಅರ್ಜಿ ಗುರಾಯಿಸಿದಂತಹ ಅನುಭವವಾದರೆ ಅದರಲ್ಲೇನು ತಪ್ಪಿಲ್ಲ ಅನ್ನಿಸುತ್ತದೆ. ಯಾಕಂದ್ರೆ ಮೊದಲೆಲ್ಲಾ ಗುರು ಅಥವಾ ಧರ್ಮಗುರು ಅನ್ನಿಸಿಕೊಳ್ಳಬೇಕಾದರೆ ತುಂಬಾ ನಿಷ್ಟೆ, ಅನುಷ್ಟಾನ, ಅಪಾರ ಜ್ಞಾನ, ಅಷ್ಟೇ ಮನೋಹಿಡಿತ, ಎಲ್ಲಾ ಆಸೆ-ಆಕಾಂಕ್ಷೆಗಳನ್ನ ನಿಗ್ರಹಿಸಿ ದೀಕ್ಷೆ ಪಡೆಯಬೇಕಾಗಿತ್ತು, ಅದರಂತೆ ನಡೆಯಬೇಕಾಗಿತ್ತು ಕೂಡಾ. ಆದರೇ ಇಂದು????
ಅವನ್ಯಾವನೋ ಗುರು ಅಂತೆ..! ಅವನ ಬಾಲವಿರದ ಹಿಂಬಾಲಕರೆಲ್ಲಾ ಬಲ್ಗೇರಿಯನ್ ದೆವ್ವ ಮೆಟ್ಗೊಂಡ ತರ ಎಗರಿ ಎಗರಿ ಕೂರ್‍ತಾರೆ, ಫಾರಿನ್ ಪಿಗರ್‌ಗಳನ್ನೇಲ್ಲಾ ಶಿಷ್ಯೆ ಮಾಡಿಕೊಂಡು, ಬಾಯ್ತುಂಬಾ ಚೆನ್ನಾಗಿ ಇಂಗ್ಲಿಷ್ ಮಾತಾಡ್ಕೊಂಡು, ನಮ್ಮ ಸನ್ನಿ ಲಿಯೋನಿಗೂ ಏನೂ ಕಮ್ಮಿ ಇಲ್ಲದತರ ತಮ್ಮ ಅಗಾಧ ಶ್ರಮವನ್ನೆಲ್ಲಾ ಧಾರೆ ಎರೆದಿದ್ದಾರೆ ಎನ್ನುವ ’ಗುರು’ತರ ಆರೋಪದಲ್ಲಿ ಸಿಕ್ಕಾಕ್ಕೊಂಡು, ಆಗಾಗ ಜೈಲಿಗೆ ಹೋಗಿ ಬರೋದ್ರಲ್ಲೇ, ಕೋರ್ಟು-ಸ್ಟೇಷನ್ನು ಅಂತಾ ಅಲೆಯೋದ್ರಲ್ಲೇ ತಮ್ಮ ಅಮೂಲ್ಯ ಜೀವನವನ್ನ ’ಗುರು’ ಎನ್ನುವ ಪದ ಹಾಗೂ ನಂಬಿಕೆಯ ಜೊತೆಯೇ ಕಳೆಯುತ್ತಿರುವ ಕಾಮಿಸ್ವಾಮಿ ನಮಗ್ಯಾರಿಗೂ ಅಪರಿಚಿತನೇನಲ್ಲಾ..!
ಮತ್ತೊಬ್ಬ, ಗುರುಜೀ ಅಂತಾ ಹೇಳ್ಕೊತಾನೆ. ತನ್ನ ಹೊಟ್ಟೆಯನ್ನೇ ಬ್ರಂಹ್ಮಾಡ ಮಾಡ್ಕೊಂಡಿದಾನೆ. ಇರೊ ಬರೋ ಹೆಣ್ಮಕ್ಳ ಬಗ್ಗೆ ಬಾಯ್ತುಂಬಾ ಒಳ್ಳೋಳ್ಳೆ ಕರ್ಣಕಠೋರ ಅಣಿಮುತ್ತುಗಳನ್ನ ತೂಕಡಿಸುತ್ತಾ ಉದುರಿಸುವುದು ಇವನ ಚಾಳಿ. ಆಗ್ಗಾಗ್ಗೆ ಆಗದಿರುವ ಬಗ್ಗೆ ಹೇಳ್ಕೋತಾ ಎಲ್ಲರನ್ನು ಭಯಬೀಳಿಸುತ್ತಾ ಭವಿಷ್ಯ ಹೇಳೋದೇ ಇವನ ಕಾಯಕ. ದೇವಿ ಇವನ ಕನಸಲ್ಲಿ ಬರುತ್ತಾಳಂತೇ, ಏನೇನೋ ಹೇಳ್ತಾಳಂತೆ. ಜನ ನೋಡದಿದ್ದರೂ ದೂರದರ್ಶನದಲ್ಲಿ ಮಕತೋರಿಸೋ ಅದಮ್ಯ ಆಸೆ ಹೊಂದಿದ್ದು ’ಪೊಳ್ಳು ಮಾತುಗಳೇ ಹೊಟ್ಟೆ ತುಂಬಿಸುತ್ತವೆ, ಅದನ್ನು ಕೇಳಲೆಂದೇ ಜನರಿದ್ದಾರೆ’ ಎಂಬುದು ಇವನ ಬಲವಾದ ನಂಬಿಕೆ. ಅದಕ್ಕೆಂದೇ ರಿಯಾಲಟಿ ಶೋ ದಲ್ಲಿಯೂ ಬಾಡಿ ಬ್ರಂಹ್ಮಾಡ ತೊರಿಸುತ್ತಾ ಸ್ವಿಮ್ಮಿಂಗ್ ಪೂಲ್ ನಲ್ಲಿ ಈಜಾಡ್ಕೋಂಡು ಅವಾಗಾವಾಗ ಹೀರೊಯಿನ್ನ್ ಕೈಯಿಂದ ಮಸಾಜ್ ಮಾಡಿಸಿಕೊಳ್ಳೋ ಇವನು ಸಾಮಾನ್ಯ ಮನುಷ್ಯನೇ ಅಲ್ಲಾ ಅನ್ನೋದು ಅವನ ಬಗ್ಗೆ ತಿಳಿದವರ ಆಂಬೋಣ.
ಇಷ್ಟಕ್ಕೇ ಮುಗಿಯುವುಯದಿಲ್ಲ ಕಳ್ಳಗುರುಗಳ ಕರುಮಕಾಂಡ. ಇಲ್ಲಿ ಮತ್ತೊಬ್ಬನನ್ನು ಉದಾಹರಿಸಲೇ ಬೇಕು. ಅವನು ಕೂಡಾ ಗುರುವಂತೆ, ಸವಾಮಿಯಂತೆ..! ಅವನಾಟ ನೋಡಲು ನಮಗೆ ಎಲ್ಡಲ್ಲ-ನಾಲ್ಕೆಂಟು ಕಣ್ಣುಗಳು ಇದ್ದಿದ್ದರೂ ಶಾರ್ಟೇಜ್ ಬಿದ್ದಿತೇನೋ ಅನ್ನುವ ಗುಮಾನಿ ಕಾಡತ್ತೆ. ಟೀವಿಯಲ್ಲಿ ಠೀವೀಯಿಂದ ನಾಚಿಕೆಬಿಟ್ಟು ನಡೆದುಕೊಳ್ಳೋ ಆವಯ್ಯ ಯಾವ ಟೀಕೆಗೂ ಜಗ್ಗದ ಭಲೇ ನಾಟಕಕಾರ. ಆ ಮನುಷ್ಯ ಕುಂತರೇ ಕಾಳಿ ಅಂತೆ, ನಿಂತರೇ ಭದ್ರ್ರಕಾಳಿಯಂತೆ, ಎದೇ ಮೇಲೇ ತಕದಿಮಿ ಎಂದು ಕಾಳಿಯನ್ನೇ ಕುಣಿಸುತ್ತಾನಂತೆ. ಅವನೇನು ಕಾಳಿ ಆಂತಂದ್ರೆ ಅವನು ಸಾಕಿರೋ ಕೋಳಿ ಎಂದುಕೊಂಡಿದ್ದಾನೋ ಹೇಗೇ? ಕಾಂಟ್ರವರ್ಸಿ **ಮಗ ಎಂದು ಬೇರೆಯವರು ಹೇಳುತ್ತಿದ್ದರೂ, ತಲೆಕೆಡಿಸಿಕೊಳ್ಳದೇ, ನಾಚಿಕೆಪಟ್ಟುಕೊಳ್ಳದೇ ತನ್ನ ಕಾರ್ಯದಲ್ಲಿ ಮುಳುಗೇಳುತ್ತಾ, ’ನಾನೂ ಸೂಪರ್ರೂ ರಂಗಾ….’ ಎಂದು ಹಾಡುತ್ತಾ, ಹುಡುಗಿಯರ ಕೈ ಹಿಡಿದು ಕುಣಿಯುವುದರಲ್ಲೇ ಇವನು ತಲ್ಲೀನ.
ಸುದ್ದಿವಾಹಿನಿಯೊಂದರಲ್ಲಿ ಮಕಕ್ಕೆ ಸರಿಯಾಗಿ ಮಂಗಳಾರತಿ ಮಾಡಿಸಿಕೊಂಡು, ಗಳಗಳನೇ ಅತ್ತು ಕಾವಿ ಕಳಚುತ್ತೇನೆಂದು ಹೇಳಿಕೆ ಕೊಟ್ಟು ಕಳೆದುಹೋಗಿದ್ದ ಈ ಕೋಳೀ ಸ್ವಾಮಿ ಮತ್ತೆ ಗುರು ಹೆಸರಲ್ಲಿ ಮಕ ತೊರಿಸುತ್ತಿರುವುದು ನೋಡಿ ಬ್ಯಾಲೆನ್ಸ ಉಳಿದ ನಮ್ಮೆಲ್ಲರ ಜನ್ಮಗಳೆಲ್ಲಾ ಪಾವನವಾದವು. ಅವನು ಅವಕಾಶವಾದಿಯಂತೆ, ಕ್ಯಾಮರಾ ಮುಂದೆಯೇ ಆಟವಾಡುತ್ತಾನಂತೆ. ಮೊದಲಿನಂತೇ ನಾಟಕ, ನೃತ್ಯ ಮಾಡಿಕೊಂಡು ಇದ್ದ ಹೊಟ್ಟೆತುಂಬಿಸಿಕೊಲ್ಲುವುದ ಬಿಟ್ಟು ಗುರುವಾಗು ಎಂದು ಹೇಳಿದವರಾರೋ? ಇದಕ್ಕೆ ಸರಿಯಾಗಿ ಗುರು ಎಂದು ಹೇಳಿಸಿಕೊಂಡ ಮೇಲೂ ಆ ಸ್ಥಾನಕ್ಕೆ ಕಳಂಕ ತರುತ್ತಿರುವುದು ನಿಜಕ್ಕೂ ಖೇಧಕರ.  
ಗುರುವು ಸಮಾಜೋದ್ಧಾರಕ್ಕೆ ಆಶಾವಾದಿಯಾಗಿರಬೇಕೇ ಹೊರತು ಅವಕಾಶವಾದಿ ಖಂಡಿತ ಸಲ್ಲದು. ಚೋರ ’ಗುರು’ವಾಗಿದ್ದುಕೊಂಡು ಚಮಚಾಗಿರಿಯಲ್ಲಿಯೇ ಬಾಳು ಸವೆಸುವ ಇವರ ಬಿಕನಾಸಿ ಬಾಳಿಗೆ ಬತ್ತಿ ಇಟ್ಟು, ಕಷ್ಟಪಟ್ಟು ದುಡಿಯಲಿ. ಪೀಠ ರಾಜಕೀಯ ಎಲ್ಲಾ ಬದಿಗಿಟ್ಟು ಜನರ ಜೊತೆ ಸ್ವಂದಿಸುವ, ಸರಿಯಾದ ಮಾರ್ಗದರ್ಶನ ನೀಡುವ ಕೆಲಸ ಮಾಡಲಿ, ಎಲ್ಲಕ್ಕಿಂತ ಮೊದಲು ತಮ್ಮನ್ನು ತಾವು ನಿಯಂತ್ರಿಸಿಕೊಳ್ಳಲಿ. ಕರುಮಕಾಂಡದ ಕಳ್ಳಗುರುಗಳೇ ತುಂಬಿರುವ ಈ ನಮ್ಮ ಸಮಾಜದಲ್ಲಿ ನಿಜವಾಗಿಯೂ ಆದರ್ಶವಾಗಿರುವ ಗುರು ಇಲ್ಲವೆಂದಲ್ಲ. ಇದ್ದೇ ಇರುತ್ತಾರೆ. ಆದರೆ ಅವರು ಪಳಪಳ ಹೊಳೆವ ತಗಡಿನಂತಲ್ಲ. ಯಾವುದೇ ಮಿಶ್ರಣ ಮಾಡಿರದ ಶುದ್ದ ಚಿನ್ನದಂತೆ. ಅದೇನೇ ಇರಲಿ, ಕೆಲವು ಖದೀಮರಿಂದ, ಕಳ್ಳಗುರುಗಳಿಂದ ಎಲ್ಲಾ ಧಾರ್ಮಿಕ, ಸಾಮಾಜಿಕ ’ಗುರು’ ಪದವೇ ಸುಟ್ಟು ಕರಕಲಾಗುತ್ತಿರುವುದು ಮಾತ್ರ ವಿಪರ್ಯಾಸ, ಇದೇ ಸಧ್ಯದ ವಾಸ್ತವಿಕ.
-ಫ್ಲಾಪೀಬಾಯ್

Saturday, 6 April 2013


ಮುದೀ ಯುವಕರು ....

ಮೊನ್ನೆ ಇಂಡಿಯ- ಆಸ್ಟ್ರೇಲಿಯ ಮ್ಯಾಚ್ ಅಲ್ಲಿ ನಮ್ಮವರು ಗೆಲ್ಲೋದನ್ನ ನೋಡ್ತಾ ಕೂತಿದ್ದೆ. ಅಷ್ಟರಲ್ಲಿ ನನ್ ಫ್ರೆಂಡ್ ಪುಡಾರಿ ಬಂದ. ಅವನ ನಿಜವಾದ ಹೆಸರು ಪುಂಡರೀಕ ಅಂತ.. ಓದೋದನ್ನ ಮೊಟಕುಗೊಳಿಸಿ ರಾಜಕೀಯ ಪಾಲ್ಟೀ, ಸಂಘಟನೆ, ಅದು ಇದು ಅಂತ ಏನೇನೋ ವ್ಯವಹಾರ ಮಾಡ್ತಾ ಕೆಲವು ರಾಜಕೀಯ ವ್ಯಕ್ತಿಗಳಿಗೆ ಬಕೇಟು ಹಿಡ್ಕೊಂಡು ಹೆಂಗೋ ಬದ್ಕಿದ್ದ. ಹಳೇ ಗೆಳೆಯ ಮೇಲಾಗಿ ರಾಜಕೀಯ ಸಾವಾಸ ಬೇರೇ, ಆದ್ರಿಂದ ನಮ್ಮೆಲ್ಲರ ಬಾಯಲ್ಲಿ ಅವನ ಹೆಸರು ಪುಂಡರೀಕನ ಬದಲಾಗಿ ಶಾರ್ಟ್ ಅಂಡ್ ಸ್ವೀಟ್ ಆಗಿ ಪುಡಾರಿ ಆಗೊಗಿದ್ದ. ಆ ಪುಡಾರಿ ಯಾವ ಗಳಿಗೇಲಿ ಕಾಲಿಟ್ನೋ ಅವಾಗ್ಲೇ ನಮ್ 'ಕ್ರಿಕೆಟ್ ಗಾಡು' ಒಂದು ರನ್ನಿಗೆ ಔಟಾಗಿ ಬಿಟ್ರು. ಛೇ ಅಂತ ನಾನು ಬೇಜಾರ್ ಮಾಡಿಕೊಂಡಿದ್ರೆ,
ಅತ್ಲಾಗೆ ಪುಡಾರಿದು ಸುರು ಆತು " ಥೋ ಇನ್ನು ವಯಸ್ಸಾಗಿರೋ ಮುದುಕರನ್ನ ಯಾಕಾದ್ರೂ ಆಡಿಸ್ತಾರೋ? ಸುಮ್ನೇ ಮನೇಲಿ ಕೂರಿಸಿ ಹೊಸ ಯುವಕರನ್ನ ಹಾಕ್ಕೊಬಾರ್ದ?? ಅವರಂತೂ ವಯಸ್ಸು ನಲವತ್ತಾದ್ರೂ ಆಡೋದು ಬಿಡಲ್ಲ. ಥೋ ಯಾರು ಹೇಳ್ಬೇಕಪ್ಪಾ ಇವರಿಗೆಲ್ಲಾ? ಅವರವರೇ ತಿಳ್ಕೊಂಡು ರಿಟೈರ್ಮೆಂಟ್ ತಗೋಬೇಕಿತ್ತು. ನಮ್ ದೇಶದ ಕತೆನೇ ಇಷ್ಟು..." ಅಂತ ಇನ್ನೂ ಮಾತು ನಿಲ್ಲಿಸಿರಲಿಲ್ಲಾ, ಅಷ್ಟರಲ್ಲೇ ನನಗೆ ಉರಿದೊಯ್ತು, ಮೊದ್ಲೇ ನಮ್ ಕ್ರಿಕೆಟ್ಟೇ ನನ್ ಧರ್ಮ, ಸಚಿನೇ ದೇವ್ರು ಅಂತ ಸಿರಿಯಸ್ ಆಗಿ ಆಟ ನೋಡ್ತಾ ಇದ್ರೆ, ಔಟ್ ಆಗಿರೋದನ್ನ ಹಿಯಾಳಿಸಿದ್ದೂ ಅಲ್ದೆ ನಮ್ ದೇವರಿಗೆ ರಿಟೈರ್ ಆಗೋಕೆ ಗೊತ್ತಾಗಲ್ಲ, 'ಮುದುಕಾ' ಅಂದಿದ್ದೂ ನನ್ನನ್ನೂ ಇನ್ನೂ ಕೆರಳಿಸಿತು.
"ಮಗಾ ಪುಡಾರಿ, ನಿಂಗೆ ಏನು ಗೊತ್ತು ಅಂತ ಹಲವಾರು ಕ್ರಿಕೆಟ್ ಪ್ರೇಮಿಗಳ ಆರಾಧ್ಯ ದೇವರ ಬಗ್ಗೆ ಹೀಗೆ ಇಲ್ಲ ಸಲ್ಲದ ಕಾಮೆಂಟ್ ಹೇಳೋದು? ಮುವ್ವತ್ತೊಂಬತ್ತು ವರ್ಷದ ಸಚಿನ್ ಮುದುಕಾ ಅಂತಾದ್ರೆ ನಲವತ್ತೊಂದರ ನಿಮ್ಮ ರಾಜಕೀಯ ವ್ಯಕ್ತಿ ಕೇಂದ್ರ ಮಟ್ಟದಲ್ಲಿ ನಿಮ್ ಪಾರ್ಟೀ ಯುವಕರ ಅಧ್ಯಕ್ಷಾನ ? ಅದು ಬೇಡಾ ನಲವತ್ತೈದರ ವ್ಯಕ್ತಿ ರಾಜ್ಯ ಮಟ್ಟದಲ್ಲಿ, ನಾನೇ ಯುವಕರ ಪ್ರತಿನಿಧಿ.. ಯುವಕರೇ ಒಂದಾಗಿ ನನ್ನ ಗೆಲ್ಲಿಸಿ ಅಂತೆಲ್ಲ ಭಾಷಣ ಮಾಡ್ತಾರಲ್ಲ ಅವರೆಲ್ಲ ಮುದುಕರಲ್ವ? ೪೦-೪೫ ಅವ್ರೇ ಯುವಕರು ಅಂದ್ರೆ ಇನ್ನೂ ೨೨-೨೫ ರ ಹರೆಯದ ನಾವೆಲ್ಲಾ ಪಾಪಚ್ಚಿ ಕಂದಮ್ಮಗಳ? ಇನ್ನೂ ಬಾಯಲ್ಲಿ ಫೀಡಿಂಗ್ ಬಾಟಲ್ ಇಟ್ಗೊಂಡು ವಿವೇಚನೆ ಕಳಕೊಂಡು ಈ ಹಾಳಾದ ರಾಜಕೀಯವೇ ಬೇಡಾ ಅಂತ ಸುಮ್ನೇ ಇರಬೇಕಾ? ವಯಸ್ಸು ಎಪ್ಪತ್ತು ದಾಟಿದ್ದರೂ ಹಲವಾರು ಹಗರಣಗಳನ್ನ ಮೈಮೇಲೆ ಎಳ್ಕೊಂಡು ತಪ್ಪು ಸಾಬೀತಾಗಿದ್ರೂ, ಜೈಲಿಗೆ ಹೋಗಿ ಬಂದಿದ್ರೂ, ಮಕದಲ್ಲಿ ಒಂದು ಚೂರು ವಿಷಾದನೇ ಇಲ್ದೇ ಪಾರ್ಟೀ ಇಂದ ಪಾರ್ಟೀಗೆ ಪಲ್ಟೀ ಹೊಡಿತಾ, ಸಿಕ್ಕಿದೇಲ್ಲಾ ಕಬಳಿಸಿ ಗುಡಾರದಂತ ಹೊಟ್ಟೆ ಹೊತ್ಗೊಂದು ನಡೆಯಕ್ಕೆ ಆಗದೇ ಇದ್ರೂ ಖುರ್ಚೀ ಕನಸು ಕಾಣುತ್ತ ಇರೋ ನಿಮ್ಮವರು ನಮ್ಮ ದೇಶದ ಯುವ ಶಕ್ತಿನಾ? ಯುವಕರು ಅಂತ ಹೇಳಿಕೊಳ್ಳೋ ನಿಮ್ಮ ಯಾವ ನಾಯಕರು ನಿಸ್ವಾರ್ಥತೆ ಇಂದ ಯುವಕರಿಗೋಸ್ಕರ ಏನು ಕೆಲಸ ಮಾಡಿ ಕೊಟ್ಟಿದ್ದಾರೆ ಅಥವಾ ನಿಮ್ಮ ರಾಜಕೀಯದಲ್ಲಿ ವಯಸ್ಸು ಶುರು ಆಗೋದೇ ನಲವತ್ತರ ನಂತರವೋ? ಯಾಕೆ ನಿಮ್ಮ ರಾಜಕೀಯದಲ್ಲಿ 'ಯುವಕರಿಗೆ ಆದ್ಯತೆ' ಅನ್ನೋ ಎಲ್ಲಾ ಪಕ್ಷಗಳೂ ಒಂದೇ ಒಂದು ಪಕ್ಷ ಕೂಡ ಎಲ್ಲಾ ಕ್ಷೇತ್ರದಲ್ಲಿ ಮೂವತ್ತರ ಒಳಗಿನವರಿಗೆ ಮಾತ್ರ ಟಿಕೆಟ್ ಕೊಡೋದು ಅಂತ ಘೋಷಿಸಿಲ್ಲ? ನಲವತ್ತು ದಾಟಿದ ಎಲ್ಲಾ ರಾಜಕೀಯ ನಾಯಕರು ನಿವೃತ್ತಿ ತೊಗೊಂಡು ಸುಭದ್ರ ಭಾರತ ನಿರ್ಮಾಣಕ್ಕೆ ಯುವಕರಿಗೆ ಬೆನ್ನೆಲುಬಾಗಿ ಮಾರ್ಗದರ್ಶನ ಮಾಡೋ ಕೆಲಸ ಯಾಕೆ ಮಾಡೋಲ್ಲ? ಎಲ್ಲಾ ಪಕ್ಷಗಳಲ್ಲೂ ಕುಟುಂಬ ರಾಜಕೀಯ ಇದ್ದೇ ಇದೆ. ಇರಲಿ ಏನೋ ಅಮಾಯಕ ಪ್ರಜೆಗಳು ನಾವು ಹೊಟ್ಟೆಗೆ ಹಾಕ್ಕೊತೀವಿ. ಕುಟುಂಬ ರಾಜಕೀಯ ಮಂದಿಗಳು ಕಣ್ಣು ಮಂಜಾಗಿ ಹಾಸಿಗೆ ಹಿಡಿದು ಅರಳು-ಮರಳು ಪರಿಸ್ಥಿತಿಯಲ್ಲೂ ನಿವೃತ್ತಿ ಘೋಷಿಸದೆ ರಾಜಕೀಯದಲ್ಲೇ ಇರ್ತಾರಲ್ಲ ಅವರಿಗೆ ಏನು ಹೇಳ್ತೀಯೋ ಪುಡಾರಿ ??"
ಹೀಗೆ ನಾನು ಕೆಂಡಾಮಂಡಲವಾಗಿ ಎರ್ರಾಬಿರ್ರಿ ಪ್ರಶ್ನೆಗಳ ಸುರಿಮಳೇನೆ ಸುರಿಸ್ತಾ ಇದ್ರೆ, ಪಾಪ ನಮ್ ಪುಡಾರಿ "ಅಣ್ಣಾ ಸಾಕು ಬಿಡೋ ತಪ್ಪಾಯ್ತು, ಏನೋ ತಿಳಿದೇ ನಿಮ್ ದೇವರ ಬಗ್ಗೆ ತಪ್ಪು ಹೇಳಿದೆ" ಅಂತ ಅಲವತ್ತು ಕೊಳ್ತಾ ಇದ್ರೆ ನಾನು " ಪುಡಾರಿ ಇಷ್ಟೂತ್ತು ಮಾತಾಡಿ ನನ್ನ ಕೆರಳಿಸಿದ್ದು ಅಲ್ದೆ ಇವಾಗ ಅಣ್ಣ ಅಂತ ಅಂಗಲಾಚ್ತಾ ಇದ್ದೀಯ? ಅಂತೂ ಇಂತೂ ನೀನೂ ಕಲ್ತು ಬಿಟ್ಟೆ ರಾಜಕೀಯದ ಟ್ರಿಕ್ಸ್ ಅಲ್ವ? ಈಗ ನಮ್ಮ ವಿಷಯಕ್ಕೆ ಬಾ.. ನಮ್ಮಂತ ಯುವಕರಿಗೆ ಯಾಕೆ ನಿಮ್ಮ ಕ್ಷೇತ್ರದಲ್ಲಿ ನೆಲೆ ಇಲ್ಲ ? ದೇಶದ ಎಪ್ಪತ್ತು ಶೇಕಡಾ ಯುವಕರಿದ್ರೂ ರಾಜಕೀಯದಲ್ಲಿ ಮಾತ್ರ ಯಾಕೆ ಎಲ್ಲಾ ಮುದುಕರೇ ತುಂಬಿ ತುಳುಕಾಡುತ್ತಿದ್ದಾರೆ? ಅದೇನೋ ಕಾರ್ಯಕರ್ತ ಅದು ಇದು ಅಂತ ಸಿಕ್ಕ ಸಿಕ್ಕ ಎಲ್ಲಾ ಪಾರ್ಟೀ ಅವರ ಹತ್ರಾನು ದುಡ್ಡು ಇಸ್ಕೊಂಡು ಪ್ರಚಾರ ಅಂತೆಲ್ಲ ಏನೇನೋ ಮಾಡ್ತಾ ಸಿಕ್ಸಿಕ್ಕಿದ್ದು ಕುಡಿತಾ ಎಲ್ಲೆಲ್ಲೊ ಸುತ್ತಾಡ್ತಾ ಇರ್ತಿಯಲ್ಲ? ಮಾಡೋಕೇನೂ ಕ್ಯಾಮೆ ಇಲ್ಲಾಂದ್ರೆ ನೀನೆ ಯಾಕೆ ಯಾವ್ದಾದ್ರು ಪಕ್ಷದಿಂದ ಟಿಕೆಟ್ ಗಿಟ್ಟಿಸಿ ನಿಂತು ಒಂದು ಕೈ ನೋಡಬಾರದು? ನೀನೂ ಇನ್ನೂ ಎಳೇ ಯುವಕ ಅಲ್ಲವ?" ಅಂದೇ..
ಪುಡಾರಿಯ ಅಂದು ಮೊದಲ ಬಾರಿಗೆ ವಿಷಾದದಿಂದ ಹೇಳತೊಡಗಿದ, "ಹುಮ್ಮ್ ನಮ್ಮನ್ನೆಲ್ಲ ಪಕ್ಷದವರೂ ತಮ್ಮ ಕೆಲಸ ಆಗೋ ವರೆಗೆ ಮಾತ್ರ ಚೆನ್ನಾಗಿ ನೋಡ್ಕೊಳೋದು ಕುಡಿಸೋದು ಮಾಡಿದ್ರು, ಆಮೇಲೆ ಕ್ಯಾರೆ ಅನ್ನಲಿಲ್ಲ. ಇವರ ಎಲ್ಲಾ ಕೆಲಸಕ್ಕೂ ನಮ್ಮಂಥ ಯುವಕರು ಬೇಕು, ಆಮೇಲೆ ಬರೀ ಭಾಷಣಕ್ಕೆ ಅಷ್ಟೇ ಸೀಮಿತ ನಾವು. ನೀನು ಹೇಳಿದ ಹಾಗೇ ರಾಜಕೀಯಕ್ಕೂ ಒಂದು ಪ್ರತ್ಯೇಕ ಮಾನದಂಡ ಇರಬೇಕಿತ್ತು ಮಗಾ. ಮುದುಕರನ್ನ ಬರೀ ಸಲಹೆಗಾರರನ್ನಾಗಿ ಮಾತ್ರ ಇಟ್ಕೊಲ್ಲೋ ಹಾಗಿರಬೇಕಿತ್ತು. ಕೇವಲ ಮೂವತ್ತೈದು ವರ್ಷ ಒಳಗಿನ ಯುವಕರಿಂದ ಮಾತ್ರ ರಾಜಕೀಯ ಪ್ರವೇಶ ಅನ್ನೋ ತರ ಕಾಯ್ದೆ ಇರಬೇಕಿತ್ತು ಅಂತ ಅನ್ನಿಸ್ತಿದೆ. ಬದಲಾವಣೆ ಯುವಕರಿಂದ ಮಾತ್ರ ಸಾಧ್ಯಾ ಅನ್ನೋ ಮುತ್ಸದ್ದಿಗಳು ಕೊನೆಗೆ ಐವತ್ತಾಗಿದ್ರೂ ನಾನೇ ಚಿರ ಯುವಕಾ ಅನ್ನೋರಿಗೆ ಏನ್ ಮಾಡೋಣ?? ಇಂತಾ ಕೊಳೆನೆಲ್ಲಾ, ಕಾಲ ಅನ್ನೋ ಕಾದ ಕಬ್ಬಿಣದ ಕೋಲೇ ಕೋಳಾ ತೊಡಿಸಿ ಕೊಳಕಾಗಿರೋ ಕೊಳಚೆನಾ ಕೊಲಾಯಿಯಲ್ಲಿಯೇ ಕೊಳೆತು ಹೋಗೋ ತರ ಮಾಡಿದ್ರೆ ಮಾತ್ರ ಏನಾದರೂ ಬದಲಾವಣೆ ಸಾಧ್ಯ." ಎಂದ ಅರ್ಥವಾಗದೆ ಇರೋ ಹಾಗೇ ಮಾರ್ಮಿಕವಾಗಿ..!!
ಅಂತೂ ನಮ್ಮಂಥ ಎಳೇ ಯುವಕರಿಗೂ ರಾಜಕೀಯ ಅರಿವಿದೆ ಆದರೂ ವ್ಯವಸ್ತೆಯ ವ್ಯವಸ್ತಿತ ವಾಸ್ತವ್ಯದಲ್ಲಿ ಅಸ್ತವ್ಯಸ್ತವಾಗಿದೆ ಎಂದು ಅರಿವಾಗಿ ಯೋಚಿಸುವಷ್ಟರಲ್ಲಿ ನಮ್ಮ ಭಾರತವು ಕಾಂಗರೂಗಳ ಗರ್ವಭಂಗ ಮಾಡಿ ಬೀಗುತ್ತಿದ್ದರೆ ಅತ್ತ ಕೆಲ ಹಿರಿ ತಲೆಗಳು ಪಿಚ್ ಕಾರಣ ಅದೃಷ್ಟ ಅದೂ ಇದೂ ಅಂತ ವ್ಯಂಗ್ಯ ಮಾಡುತ್ತಿದ್ದರೆ, ನಮ್ ಜನ'ಗೋಳೇ' ಇಷ್ಟು ಬಾ ಮಗಾ ಏನಾದ್ರು ಬೀದಿ ಬದೀದು ತಿನ್ಕೊಂಡು ಬರುವ ಅಂತ ಪುಡಾರಿ ಹೆಗಲ ಮೇಲೆ ಕೈ ಹಾಕಿ ಹೊರಟೆ..!!

Friday, 29 March 2013


ಜೆನರೇಶನ್ ಗ್ಯಾಪ್

ನಾನು ಇಲ್ಲೇ ವಿಜಯನಗರ ಬಸ್ ಸ್ಟಾಪಲ್ಲಿ ಬಸ್ ಗೆ ಕಾಯ್ತಾ ಇದ್ದಾಗ ಅಚಾನಕ್ ಆಗಿ ಒಂದು ದೃಶ್ಯ ಕಣ್ಣಿಗೆ ಬಿತ್ತು.. ನಂಗೆ ಅದನ್ನ ನೋಡಿ ನಗುನೇ ಬಂದ್ಬಿಡ್ತು.. ಮ್ಯಾಟ್ರು ಸಿಂಪಲ್, ನಾನೇನು ನೋಡಬಾರದ್ದೇನು ನೋಡಿಲ್ಲಾ..! ನಾನು ನೋಡಿದ್ದಿಷ್ಟೇ, ಬಸ್ ಗೆ ಕಾಯ್ತಾ ಇರೋ ಕಾಲೇಜು ಹುಡುಗ ಮತ್ತು ಒಬ್ಬ ಹಿರಿಯರು ಒಟ್ಟಿಗೆ ಮಾತಾಡ್ತಾ ನಿಂತಿದ್ರು ಬಹುಷಃ ಸಂಬಂಧಿಗಳೇ ಅನ್ನಿಸುವ ಹೋಲಿಕೆ ಇತ್ತು. ಆದರೆ ನನ್ನ ಗಮನ ಸೆಳೆದದ್ದು ಮಾತ್ರ ಅವರ ಧರಿಸಿದ ದಿರಿಸು ಮತ್ತು ಚಹರೆ. ಆ ಅಂಕಲ್ಲು ಶೇವಿಂಗ್ ಮಾಡಿಸಿ, ಟಿಪ್ ಟಾಪ್ ಆಗಿ ಇನ್ ಶರ್ಟ್ ಮಾಡ್ಕೊಂಡು, ಪ್ಯಾಂಟ್ ನಾ ಹೊಟ್ಟೆಗೆ ಹಾಕಿಕೊಂಡು ಮೇಲೆ ಬೆಲ್ಟ್ ಇಂದ ಟೈಟ್ ಆಗಿ ಸುತ್ತ್ಕೊಂಡಿದ್ರೆ, ಆ ಹುಡುಗ ಗಿಡ್ಡ ಟೀ ಶರ್ಟ್ ಹಾಕ್ಕೊಂಡು ಬ್ಯಾಕ್ ಅಲ್ಲಿ ಗ್ಯಾಪ್ ಇಟ್ಗೊಂಡು ಒಂದು ಜೀನ್ಸ್ ಪ್ಯಾಂಟ್ ನಾ ಸಿಗಿಸ್ಕೊಂಡಿದ್ದ. ಪುಣ್ಯಕ್ಕೆ ಒಳ ಉಡುಪು ಧರಿಸಿದ್ದ ಆ ಮಹಾನುಭಾವನ ಪ್ಯಾಂಟ್ ಈಗಲೋ ಆಗಲೋ ಬೀಳೋ ತರ ನೇತಾಡ್ತಾ ಇತ್ತು. ಯಪ್ಪಾ ಅಂತ ಮಕಾ ನೋಡಿದ್ರೆ ಅರ್ಧ ಬಿಟ್ಟಿದ್ದ ಪ್ರೆಂಚ್ ಗಡ್ಡ, ಬಣ್ಣ ಹಾಕಿದ ಕೆಂಪು ಕೂದಲು, ಕಿವಿಗೊಂದು, ಹುಬ್ಬಿನ ಬಳಿಗೊಂದು ರಿಂಗು ಏನೇನು ಅಂತಾ ವರ್ಣಿಸಲಿ ಆ ಸೊಬಗನ್ನು ಪದಗಳೇ ಸಿಗ್ತಾ ಇಲ್ಲಾ..!
ಅವತ್ತೆಲ್ಲಾ ಹಾಗೆ ಅದರ ಬಗ್ಗೆನೇ ಯೋಚಿಸ್ತಿದ್ದೆ. ಕಾಲ ಬದಲಾಗ್ತಿದೆ ಅನ್ನೋ ನೆಪ ಕೊಟ್ಟು ಜನಗಳೆಲ್ಲಾ ಯಾಕೆ ಬದಲಾಗ್ತಾ ಇದ್ದಾರೆ? ಹಿರಿಯರ ಯೋಚನೆಗಳು ಯುವಕರಿಗೆ ಏಕೆ ಸಮ್ಮತವಾಗಲ್ಲ? ಇವರೂ ನಾಳೆ ಮುದುಕರು ಆದಾಗ ಇವರ ಇದೆ ಮಾತನ್ನ ಮುಂದಿನ ಯುವ ಜನಾಂಗ ಅಪ್ಪಿಕೊಳ್ಳುತ್ತ ? ಒಪ್ಪಿಕೊಳ್ಳುತ್ತಾ? ಜನ ನಮ್ಮವರೇ ಆದ್ರೂ ಭಾಷೆ ಕನ್ನಡಾನೇ ಆಗಿದ್ರೂ ಮಾತಾಡೋ ಸ್ಟೈಲು, ಯೋಚಿಸುವ ಕೆಪಾಸಿಟಿಲಿ ಹಿರಿಯರಿಗೂ ಯುವಕರಿಗೂ ವ್ಯತ್ಯಾಸ ಇದೆ ಯಾಕೆ?
ಮೊನ್ನೆ ನಮ್ಮ ಆಫೀಸಲ್ಲಿ ಯಾವ್ದೋ ಮಾತು ಬಂದಾಗ ನಮ್ಮ ಸಹೋದ್ಯೋಗಿ ಹಿರಿಯರೆಂದರು- '"ನನಗೆ ಐವತ್ತೈದು ವರ್ಷವಾಗಿದ್ರೂ ನಾನು ಯಾರಿಗೇನೂ ಕಮ್ಮಿ ಇಲ್ಲಾ",
ಆಗ ಅಲ್ಲೇ ಇದ್ದ ಯುವ ಮಿತ್ರ ಟಕ್ ಅಂತ ಪ್ರತಿ ಉತ್ತರಿಸಿದ- "ಹೌದು ಬಿಡಿ ಸರ್ ನೀವಿನ್ನು ಇಪ್ಪತ್ತೈದರ ಯುವಕರು ಜೊತೆಗೆ ಮೂವತ್ತು ವರ್ಷಗಳ ಅನುಭವ ಬೇರೇ..! ನೀವ್ ಯಾರಿಗೂ ಕಮ್ಮಿ ಇಲ್ಲಾ..!!"
ಇಬ್ರೂ ಒಂದೇ ವಿಷಯವನ್ನ ಹೇಳಿದರೂ ಯೋಚಿಸಿದ ಪರಿಯೇ ಬೇರೇ..! ಇಬ್ರೂ ಪಾಸಿಟಿವ್ ಆಗಿಯೇ ಹೇಳಿದ್ರೂ, ಅರ್ಥ ಒಂದೇ ಆಗಿದ್ರೂ, ವ್ಯಕ್ತ ಪಡಿಸಿದ ರೀತಿಯೇ ಬೇರೇ..! ಇದು ಉದಾಹರಣೆ ಅಷ್ಟೇ, ! ಬಹುತೇಕರಿಗೆ ಇದರ ಅನುಭವ ಆಗಿರಲಿಕ್ಕೂ ಸಾಕು.. ಎಷ್ಟೇ ಓದಿಕೊಂಡಿದ್ರೂ, ಬುದ್ದಿವಂತರಾಗಿದ್ರೂ ಇಂದಿನ ತಲೆಮಾರಿನ ಮಕ್ಕಳ ಮುಂದೆ ಸ್ಪಲ್ಪ ಸಪ್ಪೆಯೇ ಅನ್ನಿಸಿ ಬಿಡುತ್ತೇವೆ. ಆಗಿನ ಕಾಲಕ್ಕೂ ಈಗಿನ ವಿದ್ಯಮಾನಕ್ಕೂ ಬದಲಾವಣೆ ಬೀಸಿದ್ದರೂ ಸಹ ಅವು ಮನಸ್ಥಿತಿಯ ಮೇಲೆ ಹೇಗೆ ಪ್ರಭಾವ ಬಿರುತ್ತೆ ? ಏಕೆಂದರೆ ನಾವೀಗ ಹೇಳುವ ಮಾಡ್ರನ್ ಅನ್ನೋ ಪದ ದಿನದಿನಕ್ಕೂ ಬದಲಾಗುತ್ತಲೇ ಇದೆ.. ಇಂದಿನ ಮಾಡ್ರನ್ ನಾಳೆ ಒಲ್ದನ್ ಆಗೇ ಆಗುತ್ತೆ, ಆಗ್ಲೇ ಬೇಕು..!
ಹಿರಿಯರಿಗೂ ಯುವಕರಿಗೂ ಇಲ್ಲಿ ಇರೋ ವ್ಯತ್ಯಾಸ ಕೇವಲ ಒಂದೆರಡು ವಿಷಯದಲ್ಲಿಲ್ಲ., ಬಹುತೇಕ ಎಲ್ಲಾ ಕ್ಷೇತ್ರಗಳಲ್ಲೂ ಎಲ್ಲಾ ವಿಚಾರಗಳಲ್ಲೂ ಇದ್ದಿದ್ದೆ..! ಅವರಿಗೆ ಇಷ್ಟವಾಗಿದ್ದು ಇವರಿಗೆ ಇಷ್ಟವಾಗಲ್ಲಾ.. ಅಂದಿಗೂ ಪ್ರೀತಿ ಪ್ರೇಮ ಎಲ್ಲಾ ಇತ್ತು, ಇಂದಿಗೂ ಇದೆ. ಆದ್ರೆ ಅಂದಿನ ಕಾಲವೇ ಸುಂದರ ಎನ್ನುವ ಹಿರಿಯರಿಗೆ, ಅಂದಿಂದೆನು ಇಲ್ಲಾ ಇಂದಿನದೇ ಎಲ್ಲಾ ಅನ್ನುವ ಯುವ ಜನ.. ಒಂಥರಾ ಶೀತಲ ಸಮರದ ಮಧ್ಯೆ ನಲುಗಿ ಹೋಗಿರುವ ಜೀವನ.. ಮನೆಮನೆಯಲ್ಲೂ ಹಿತವಚನ, ಅವರಿಂದ ಇವರಿಗೆ ಇವರಿಂದ ಅವರಿಗೆ..!
ಹೀಗೆ ಹಿಂದಿನ ಕಾರಣ ಕೆದುಕುತ್ತ ಹೋದಾಗ ಸಿಕ್ಕಿದ್ದೇ 'ಜೆನರೇಶನ್ ಗ್ಯಾಪ್' ಅನ್ನೋ ಅಭಿಪ್ರಾಯ. ಅದೇ ಕಂದಕ ನಮಗ್ಯಾರಿಗೂ ಅರಿವಾಗದೆ ಮನೆಮನೆಯಲ್ಲೂ ಮನಮನದಲ್ಲೂ ಮೂಡಿರೋದರಲ್ಲಿ ಯಾವುದೇ ಅತಿಶಯೋಕ್ತಿ ಇಲ್ಲ ಬಿಡಿ. ಬದಲಾವಣೆಗೆ ಒಗ್ಗಿಕೊಂಡಿರುವ ಮನ ಅದರ ಪರಿಣಾಮವನ್ನೂ ಸಹಿಸಿಕೊಳ್ಳಲೇ ಬೇಕಲ್ವ? ಇದರಿಂದ ಅಂತಹ ಗಂಭೀರ ತಲೆ ಹೋಗುವಂಥ ಮ್ಯಾಟರ್ ಇಲ್ದೆ ಇದ್ರೂ ಪರಸ್ಪರ ಈಗೋಗಳು ಸಾಯೋದಂತೂ ಪಕ್ಕಾ.! ಹಾಗಂತಾ ನೆಗ್ಲೆಕ್ಟ್ ಮಾಡೋಕೂ ಆಗದಂತಹ ಪರಿಸ್ಥಿತಿಯಲ್ಲಿ ನಾವೂ ನೀವೂ ಬದುಕುತ್ತಿದ್ದೇವೆ..! ಆ ಗ್ಯಾಪ್ ಅನ್ನೋ ಸೀಳನ್ನ ಹೊಂದಾಣಿಕೆ ಅನ್ನೋ ಸೀಲ್ ಇಂದ ಮುಚ್ಚಿದ್ರೆ ಮನಸ್ತಾಪ ಅನ್ನೋದನ್ನ ಮಕಾಡೆ ಮಲಗಿಸಬಹುದು ಅಂತ ನನಗೆ ಅನ್ನಿಸ್ತು, ಅದ್ಕೆ ಹಾಗೆ ತೋಚಿದ್ದು, ಹೀಗೇ ಗೀಚಿದೀನಿ..!

Friday, 22 March 2013


1 *ಪೋರಿ - ಲಾರಿ...!!

ಮದುವೆಯ ಮೊದಲು....
ನನ್ನ ನಾರಿ - ಪುಟ್ಟ ಪೋರಿ...!! 
ಮದುವೆಯ ನಂತರ....
ಹೆಮ್ಮಾರಿ ಮತ್ತು ಮಿನಿ ಲಾರಿ..!! 

2*ಕಾರು-ಬಾರು 

ಅಂದಿನ ಉದ್ಯಾನನಗರಿಯ ರಸ್ತೆಯ ಇಕ್ಕೆಲಗಳಲ್ಲಿ
ಭಾರೀ ಮರಗಳು ಮತ್ತು ಹಸಿರಿನದೇ ಕಾರು-ಬಾರು...
ಇಂದಿನ ಸಿಲಿಕಾನ್ ಸಿಟಿಯ ರಸ್ತೆಯ ಇಕ್ಕೆಲಗಳಲ್ಲಿ
ಕಾಣಸಿಗುವುದು ಬರೀ ಕಾರು ಮತ್ತು ಬಾರು..!!

3*ಪಾಶ್ಚಾತ್ಯಕರಣ 

ಪಾಶ್ಚಾತ್ಯ ಸಂಸ್ಕೃತಿಗೆ ಬೇಸತ್ತು,
ಹುಡುಕಿಕೊಂಡು ಉದ್ದ ಜಡೆ,
ಹೊರಟೆ ನಾನು ಹಳ್ಳಿ ಕಡೆ..
ಎದುರುಗೊಂಡ ಮಾವನ ಮಗಳು,
ಮುತ್ತ ಕೊಟ್ಟು ಹೇಳಿದಳು,
ಡಾರ್ಲಿಂಗ್-ವಿಶ್ ಯು ಹ್ಯಾಪಿ ಕಿಸ್ ಡೇ..!!

4*ಆಯಸ್ಸು 

ಆಸೆ, ಅಸೂಯೆ ಮತ್ತು ಜಗಳಗಳಿಗೆ
ಹೆಂಗಸರು ತಾನೇ ಫೇಮಸ್ಸು..?
ಅದಕ್ಕೆ ಇರಬಹುದೇ,
ಅವರಿಗೆ ಜಾಸ್ತಿ ಆಯಸ್ಸು..?

5*ಸೈಕಲ್ಲು 

ಉಪನ್ಯಾಸದಲ್ಲಿ ವೈದ್ಯರೆಂದರು, "ಯುವಕರೇ
ಉತ್ತಮ ಆರೋಗ್ಯಕ್ಕೆ ನೀವು- ದಿನವೂ
ಹೊಡೆಯಬೇಕು ಸೈಕಲ್ಲು"
ಯುವಕರು ಗೊಣಗಿಕೊಂಡರು, 'ನಮ್ಮ ಅನಾರೋಗ್ಯಕ್ಕೆ
ಕೂಡ ಕಾರಣ, ಹುಡುಗಿಯರಿಗೊಸ್ಕರ ನಾವು
ದಿನವೂ ಹೊಡೆದ ಸೈಕಲ್ಲು'

6*ಆಕ್ರೋಶ - ತೂರಾಟ 

ಆಕ್ರೋಶಗೊಂಡಾಗ-
ಕೆಲ ಗಂಡಸರು ನೈಂಟಿ ಹಾಕಿಕೊಂಡು
ಚಿತ್ರ-ವಿಚಿತ್ರ ನಶೆಯಲ್ಲಿ ತೂರಾಡುತ್ತಾರೆ,
ಅದೇ ಕೆಲ ಮಹಿಳೆಯರು, ನೈಟಿ ಹಾಕಿಕೊಂಡು
ಮನೆಯಲ್ಲಿನ ಪಾತ್ರೆಗಳನ್ನು ತೂರಾಡುತ್ತಾರೆ..!!

7*ದಂಪತಿಗಳು 

ಅಂದಿನ ಜಮಾನಾದಲ್ಲಿ, ಮನೆ-ಮನೆಯಲ್ಲಿಯೂ
ಇರುತ್ತಿದ್ದರು, 'ಆದರ್ಶ ದಂಪತಿಗಳು'
ಆದರೆ ಇಂದು ಕಾಣಸಿಗುತ್ತಿರುವುದು,
ಬರೀ ಡೈವೊರ್ಸಿಗಳು ಮತ್ತು ದಂ-ಪತಿಗಳು..!

8*ನಗಬೇಕು 

ಮನಸ್ಸು ಉಲ್ಲಾಸಭರಿತವಾಗಿಡಲು
ಬಾಯ್ತುಂಬಾ ಆಗಾಗ, ನಗಬೇಕು
ಅದಿಕ್ಕೆ ಅಲ್ಲವೇ ಮಹಿಳೆಯರು
ಕೇಳುವುದು ಆಗಾಗ, 'ನಗ-ಬೇಕು'

9*..ಬಂದ್, ..ಬಂದ್, ..ಬಂದ್..!

ನಮ್ಮಲ್ಲಿ ಆಗಾಗ್ಗೆ ನಡೆಯುತ್ತಿರುತ್ತವೆ
ಮುಷ್ಕರ, ಗಲಾಟೆ ಮತ್ತು
..ಬಂದ್, ..ಬಂದ್, ..ಬಂದ್..!
ಹಾಗಾಗಿ ಹಲವು ದಿನಗೂಲಿ ಬಡವರ
ಕೆಲಸ ಬಂದ್, ಊಟ ಬಂದ್,
ಕೆಲವು ಕಂದಮ್ಮಗಳ ಉಸಿರಾಟವೂ ಅಂದೇ ಬಂದ್..!!

10*ಪಂಥಾಹ್ವಾನ

ಅವಳೆಂದಳು,
'ನಾವು ನೀವ್ ಮಾಡುವ
ಎಲ್ಲಾ ಕೆಲಸಗಳನ್ನೂ ಮಾಡಬಲ್ಲೆವು,
ಪಂಥಾಹ್ವಾನ-ನೋಡುವಿಯೇನು?'
ನಾನೆಂದೆ,
ನಾವು ಆಗಾಗ ಶೇವಿಂಗ್
ಮಾಡುತ್ತಿರುತ್ತೇವೆ,
ಮತ್ತೆ ನೀವು??'

11*ರಾಜಕಾರಣ.

ಅಂದಿನ ಹಂಪೆಯ
ವೈಭವದ ಉತ್ತುಂಗಕ್ಕೆ
'ರಾಜ' ಕಾರಣ
ಇಂದು ಹಂಪೆ
ಹಾಳು ಕೊಂಪೆಯಾಗಲೂ ಕೂಡ
ಕಾರಣ, ನಮ್ಮವರ ರಾಜಕಾರಣ..!!

12*ಸ್ಥಿತಿ - ಗತಿ 

ಕಾಲೇಜಿನ ಆರಂಭಿಕ ದಿನಗಳಲ್ಲಿ,
ನಾವೇ ಹೀರೋ / ಹಿರೋಯಿನ್ನು..!
ಪರೀಕ್ಷೆಯ ಸಂದರ್ಭದಲ್ಲಿ ಮಾತ್ರ
ನಮ್ಮ ಸ್ಥಿತಿ, ಪಿನ್ನು ಚುಚ್ಚಿದ ಬಲೂನು..!!

13*ಬಾಲ್ಯ ಸಂಗಾತಿ 

ನಮ್ಮ ಬಾಲ್ಯದಲ್ಲಿ ಉತ್ತಮ ಸಂಗಾತಿಗಳಾಗಿದ್ದವು,
ಚಂಪಕ, ಬಾಲಮಂಗಳ, ಚಂದಾಮಾಮ..!!
ಈಗಿನ ಮಕ್ಕಳ ಕರುಮ
ಮೂರೊತ್ತು ಹಿಡಿದಿರುತ್ತವೆ, ವಿಡಿಯೋ ಗೇಮ..!!

14*ವಿಪರ್ಯಾಸ 

ಚಿಕ್ಕವರಿದ್ದಾಗ,
ಹೆಣ್ಣು ಮಕ್ಕಳು
ಕೇಳುತ್ತಿದ್ದರು ಬಾರ್ಬಿ ಡಾಲ್,
ಗಂಡು ಮಕ್ಕಳಿಗೆ ಆಟಿಕೆ ವೆಹಿಕಲ್..!
ದೊಡ್ಡವರಾದಾಗ,
ಹುಡುಗರು ಹುಡುಕುವುದು ಡಾಲ್,
ಹುಡುಗಿಯರು ಬಯಸುವುದು ವೆಹಿಕಲ್...!!

15*ಚಂದಾಮಾಮ 

ಆದಿ ಕಾಲದಿಂದಲೂ ಚಿಕ್ಕ ಮಕ್ಕಳೆಲ್ಲರಿಗೂ
ಮಾಮ ಆ ಚಂದ್ರ..!
ಅದಕ್ಕೆ ಇರಬೇಕು,
ಬೆಳೆದು ಮದುವೆ ಆದಮೇಲೆ
ಮಾಮನ ಆಶಿರ್ವಾದಕ್ಕೆಂದು
ಹೋಗುತ್ತಾರೆ- 'ಮಧು ಚಂದ್ರ'

17*ಸಾರಿಗೆ 

ಬೇಕೇ ಬೇಕು ಮಹಿಳೆಯರಿಗೆ
ಪ್ರತ್ಯೇಕ ಸಾರಿಗೆ...
ಯಾಕೆಂದರೆ ಅವರು ಚೆಂದ ಹಾಕ್ತಾರೆ
ವಗ್ಗರಣೆ, ಸಾರಿಗೆ...

18*ನನ್ನವಳು - ಆಗ ಈಗ 

ಮದುವೆಗೆ ಮೊದಲು 
ಅವಳು ರಸಗುಲ್ಲದಂತವಳು..
ಮದುವೆಯ ನಂತರ 
ರಸ ಹೀರುವ ಜಂತು ಹುಳು ... 


19*ಮಿನುಗುತಾರೆ

ಅಂದಿನ ಕಾಲದ ನಟಿಮಣಿಯರಲ್ಲಿ
ಕಲ್ಪನಾ 'ಮಿನುಗುತಾರೆ'... 
ಇಂದಿನ ಕಾಲದ ನಟಿಮಣಿಯರು
ತಮ್ಮ ಕಲ್ಪನೆಯಲ್ಲಿಯೇ ಮಿನುಗುತ್ತಾರೆ....

20*ನಾಚಿಕೆ 

ಅಂದು ನಾಚಿಕೆಯೇ ಮಹಿಳೆಯರ 
ಆಸ್ತಿ, ಸಂಪತ್ತಿನ ಗಣಿ 
ಇಂದು ಕೆಲವರಲ್ಲಿ ಸ್ವಲ್ಪವೂ ಕಾಣುವುದಿಲ್ಲ 
ಅವರು ಹಾಕಿಕೊಂಡಿದ್ದರೂ ಕೂಡ ಬಿಕಿನಿ..!!

21*ನೆಕ್ಲೇಸು

ಮಹಿಳೆಯರು ಅಂದ ಹೆಚ್ಚಿಸಿಕೊಳ್ಳಲು 
ಧರಿಸುತ್ತಾರೆ ಆರ್ಟಿಫಿಶಿಯಲ್ ನೆಕ್ಲೇಸು..! 
ಗಂಡಸರೇ ಸುಂದರರು, ಅದಕ್ಕೆ 
ಅವರಿಗೆ ನ್ಯಾಚುರಲ್  'ನೆಕ್' ಲೇಸು..!!

22* ಬುಗುರಿ-ಲಗೋರಿ ಮತ್ತು ಗೋರಿ 

ಒಂದು ಕಾಲದಲ್ಲಿ ಆಟವೆಂದರೆ, 
ಬುಗುರಿ ಮತ್ತು ಲಗೋರಿ..! 
ದುರಂತ ನೋಡಿ 
ಇಂದಿನ ಕ್ರಿಕೆಟ್ ಆರ್ಭಟದಲ್ಲಿ 
ಅವು ತೊಡಿಕೊಂಡಿವೆ ಗೋರಿ..!!

23* ಅಂಗಿ -ಲುಂಗಿ 
ಮಾಡ್ರನ್ ಮಹಿಳೆಯರಿಂದ
ಬೆಲೆ ಕಳೆದುಕೊಂಡಿದೆ
'ನಮ್ಮದು' ಎನ್ನುವಂತಿದ್ದ
ಪ್ಯಾಂಟು ಮತ್ತು ಅಂಗಿ..!!
ಏನನ್ನೂ ಬಿಟ್ಟಿಲ್ಲ ಅವರು
ಹೇಳಿಕೊಳ್ಳಲೂ
ನಾಚಿಕೆಯಾಗುತ್ತಿದೆ,
ಇದಿನ್ನೂ 'ನಮ್ಮದೇ ', ಲುಂಗಿ..!

24* ನಾವೇನ್ ಕಮ್ಮಿ ?

ವಿದೇಶಿಯರೂ ಕಲಿಯುತ್ತಿದ್ದಾರೆ ಯೋಗಾ,
ಧರಿಸುತ್ತಿದ್ದಾರೆ ಸೀರೆ..
ರೀ ಸ್ವಾಮೀ,,
ನಾವೇನು ಕಮ್ಮಿ,,?
ಇತ್ತೀಚಿಗೆ ನಮ್ಮವರೂ
ಹಾಕಿಕೊಳ್ಳುತ್ತಿಲ್ಲವೇ 'ಬಿಕಿನಿ' 

25*ಕಲ್ಲಂಗಡಿ-ಅಂಗಡಿ

ಸಾಲ-ಸೋಲ ಮಾಡಿ 
ರೈತನೋರ್ವ ಅಂಗಡಿ
ತುಂಬಾ ತುಂಬಿಸಿದ ಕಲ್ಲಂಗಡಿ..!!
ವಿಧಿಯ ಆಟ,
ದಲ್ಲಾಳಿಗಳ ಕಾಟ,
ಸಾವಿಗೆ ಶರಣಾದ ರೈತ,
ಈಗ ಪಳೆಯುಳಿಕೆಯಾಗಿ ಉಳಿದದ್ದು ಮಾತ್ರ 
ಪಾಳುಬಿದ್ದ ಆ ಕಲ್- ಅಂಗಡಿ  
  
26* ಹಿರಿಯರಿಗೆ ಅರ್ಪಣೆ 

ಚುಟುಕು, ಹನಿಗವನಗಳ ರಾಜ 
ನಮ್ಮ 'ಚುಟುಕು ರತ್ನ'- 'ದುಂಡಿರಾಜ'
ಅವರಿಗೆ ಎಲ್ಲಿಂದ ಹೊಳೆಯುತ್ತೆ ಇವೆಲ್ಲಾ??
ಅವರಿಗೆ ಮಾತ್ರ , 
ಎಳೆದಿರಬಹುದೇ ಆಶಿರ್ವಾದದ ಕೈಯಿ 
'ಚುಟುಕುಬ್ರಹ್ಮ' - ದಿನಕರ ದೇಸಾಯಿ 


27*UK-ನಮ್ಮ ಉತ್ತರ ಕನ್ನಡ..!!

ಅದೊಂದು ಬೆಂಗಳೂರಿನ ಪ್ರತಿಷ್ಟಿತ ಖಾಸಗೀ ಕಂಪನಿ
ಕನ್ನಡಿಗರಿಗೆ ಕೆಲಸ ಕೊಡಲು ಅವರ ಕಣ್ಣಲ್ಲಿ ಕಂಬನಿ..
ಆನ್-ಲೈನ್ ನಲ್ಲಿ ಸಂದರ್ಶನ
ಆಫ್ -ಲೈನ್ ಅಲ್ಲಿ ರಿಜೆಕ್ಷನ..
ಕಾರಣ- ಕನ್ನಡಿಗರಿಗೆ ಕೆಲಸ ಕೊಡಲು
ಅಳಕುತ್ತಿತ್ತು ಅವರ ಮನ ...

ಅಚಾನಕ್ ಆಗಿ ನನ್ನ CV ಸೆಲೆಕ್ಟ್ ಆಯ್ತು...
ಇಂಟರ್ ವ್ಯೂ ಕೂಡ ಮುಗಿತು...
ಕೆಲಸ ಕೂಡಾ ಸಿಕ್ಕಿತು..

ನನ್ನ ಕೆಲಸದ ಮೊದಲ ದಿನ,
ಬಾಸ್ ಅಂದ ಒಹ್ ಕಮ್..
ಆರ್ ಯು ಫ್ರಾಮ್ ಯುನೈಟೆಡ್ ಕಿಂಗ್ ಡಮ್...!!?
ನಾನಂದೆ ನೋ
ಅವನೆಂದ, ಬಟ್ ಇನ್ ಯುವರ್ CV ಅಡ್ರೆಸ್ ಇಸ್ UK..
ನಾನಂದೆ (ಒಹ್ ಮಂಕೇ-ಮನದಲ್ಲಿ)
ಐ ಯಾಮ್ ಫ್ರಾಮ್ ಕರ್ನಾಟಕದ ಕಾಶ್ಮೀರ
ನಮ್ಮ ಉತ್ತರ ಕನ್ನಡ..!!

28*ಹಿಂದಿಂದ ಸುಂದರಿ 

ಹಿಂದಿನಿಂದ ನೋಡಿ ತಿಳಿದೆ,
ಇರಬೇಕು ಇವಳ್ಯಾರೋ 
ಅಪ್ರತಿಮ ಸುಂದರಿ..!!
ಮುಂದಿನಿಂದ ಮುಖ 
ನೋಡಿದ ಮೇಲೆ ಗೊತ್ತಾತು,
ಥೋ, ಅವ ಮೋಟು ಜಡೆಯ ಹುಡುಗಾ ರೀ..!!

29*ವಾಟರ್ ಡೇ 

ಇಂದು 'ವಿಶ್ವ ಜಲ ದಿನ'
ಬನ್ನಿ ಒಟ್ಟಾಗಿ ಆಚರಿಸೋಣ,
ಘೋಷಣೆಗಳನ್ನ ಕೂಗೋಣ,
ಭಾಷಣಗಳನ್ನ ಮಾಡೋಣ..!
ಹೇಗಿದ್ರೂ ನಾಳೆ ಇಂದ ಇದ್ದೇ ಇದೆಯಲ್ಲ,
ಬೋರುವೆಲ್ಲು ಕೊರಿಯೋದು,
ನೀರು ಪೋಲು ಮಾಡೋದು...!!

30*ಕವ ಕವ ಕವನ 
ನಾನೂ ಯತ್ನಿಸಿದೆ ಬರೆಯಲೊಂದು ಕವನ 
ಆ ಒಂದು ದಿನ..
ಬೆವರೂ ಬಂತು ಅಳುವೂ ಬಂತೂ, 
ಆದರೂ ಮೂಡಲಿಲ್ಲ ಒಂದು ಕವನ..!!
ಕೆರೆದು ಕೊಂಡೆ ನನ್ನ ತಲೆಯನ್ನ, ಗಡ್ಡವನ್ನ..
ಹರಿದರಿದು ಬಿಸಾಕಿದೆ ಬುಕ್ಕಿನ ಪುಟವನ್ನ..!!
ಆದರೂ ಹೊಳೆಯಲಿಲ್ಲಾ ಒಂದೇ ಒಂದು ಲೈನು...
ಥೋ ಇದು ಸಾವಾಸಲ್ಲ ಎಂದು ಹೊರಟೆ ನಾನು... !!

ಆಕಾಶದಲ್ಲಿ ಹಾರುತ್ತಿತ್ತು ಮೀನು...
ಸಮುದ್ರದಲ್ಲಿ ಓಡುತ್ತಿತ್ತು ಪ್ಲೇನು...!!
ಜನಗಳೇ ಇರಲಿಲ್ಲ ಸುತ್ತಲು..
ನನ್ನ ಬಳಿ ಕವಿದಿತ್ತು ಬರೀ ಕತ್ತಲು..!!

ಅಳುವಿಲ್ಲಾ ನಗುವಿಲ್ಲ ಮಾತಾಡಲು ಬಾಯಿಯೂ ಬರುತಿಲ್ಲಾ..
ನೋವಿಲ್ಲ ನಲಿವಿಲ್ಲ ಏಕಾಂಗಿತನದ ಹೊರತು ಬೇರೆಯ ನೆರಳಿಲ್ಲ..
ಭಯ ಬಿಟ್ಟು ಹುಡುಕಿದೆ ಎಲ್ಲಾ, ಆದರೂ ಯಾರೂ ಕಾಣಲಿಲ್ಲಾ..
ನನಗೆ ನಾನೇ ಎಲ್ಲಾ, ಆಗ ಕಂಡಿತು ನೆಮ್ಮದಿಗಳ ಕೈ ಚೀಲ...!!

ಇದೆ ಕುಶಿಯಲ್ಲಿ ಕುಣಿದೆ ಕುಪ್ಪಳಿಸಿದೆ..
ಧಬ್ಬ್ ಎಂದು ಸದ್ದಾಯಿತು ..
ಕಣ್ಣು ಬಿಟ್ರೆ ಮಂಚದಿಂದ ಕೆಳ ಬಿದ್ದಿದ್ದೆ..
ಮೈ ಕೈ ಎಲ್ಲಾ ನೋವಾಯಿತು..!!

ಇದು ಕನಸಲ್ಲಿ ನಾನು ಬರೆದ ಕವನ..
ಈಗ ನೀವು ಓದಿದ್ದೆ ಆದರೆ ಲೈಟ್ ಆಗಿ ಹಚ್ಚಿಕೊಳ್ಳಿ ನಿಮ್ಮ ತಲೇನಾ..
ಕಾರಣ ನೀವು ಕಳೆದುಕೊಂಡಿದ್ದು ನಿಮ್ಮ ಸಮಯಾನ ..!!

Tuesday, 19 February 2013

ಭಯ ಬಾಯಿಗೆ ಬಂದಾಗ....

ಇದು ಸುಮಾರು ಮೂರು ವರ್ಷದ ಹಿಂದಿನ ಸ್ಟೋರಿ... ನೆನಸ್ಕೊಂಡ್ರೆ ಈಗಲೂ ಒಂಥರಾ ಭಯ ಜೊತೆಗೆ ನಾಚಿಕೆ ಜೊತೆಗೆ ಇನ್ನೂ ಏನೇನೋ ಆಗುತ್ತೆ ನಂಗೆ..!!
ಅವತ್ತು ರಾತ್ರಿ... ಸಮಯ ಸುಮಾರು ೧೧.೩೦ ನನ್ನ ಬೈಕ್ ಹಾಳಾಗಿದ್ದರಿಂದ ಕಂಪನಿಯಲ್ಲಿ ನೈಟ್ ಶಿಫ್ಟ್ ಮುಗಿಸ್ಕೊಂಡು ಹದಿನೈದು ಕಿಲೋಮೀಟರು ಬಸ್ಸಲ್ಲಿ ಹೋಗಿ ಮತ್ತೆ ಒಂದೂವರೆ ಕಿಲೋಮೀಟರು ಏಕಾಂಗಿಯಾಗಿ ನಡೆದುಕೊಂಡು ಹೋಗಿ ಮನೆ ಸೇರಬೇಕಾದ ಪರಿಸ್ಥಿತಿ..!! ಅನಿವಾರ್ಯ ಬಸ್ಸನ್ನ ಹತ್ತಿದೆ.. ತುಂಬಾ ರಶ್ ಬೇರೆ ಇತ್ತು... ಹೆಂಗೋ ನೇತಾಡಿಕೊಂಡು ಹೋಗ್ತಾ ಇದ್ದೆ... 
ಅಲ್ಲೇ ಶುರುವಾಗಿದ್ದು ಸಮಸ್ಯೆ ..ಎದುರುಗಡೆ ಒಬ್ಬ ದೈತ್ಯ ದೇಹಿ ಗೊಗ್ಗಯ್ಯ ಗುಬೇಕಣ್ಣಿನವನು ಗುರ ಗುರ ಅಂತ ಒಂದೇ ಸಮನೆ ಗುರಾಯಿಸ್ತಾ ಇದ್ದ.. ರಾತ್ರಿ ಬೇರೆ... ತಿನ್ನೋ ತರ ನೋಡ್ಕೊಂಡು ಅವಾಗವಾಗ ತುಟಿ ಬೇರೆ ಕಚ್ಕೊತಾ ಇದ್ದ ಹಾಳಾದವ.. ನಾನೂ ಆಗಿನ್ನೂ ಇಪ್ಪತ್ತರ ಹರೆಯದ ಅಮಾಯಕ ಮುಗ್ದ.. ನನ್ ಲೈಫಲ್ಲಿ ಮೊದಲ ಸಲ ನನ್ನ ಶೀಲದ ಮೇಲೆ ಭಯ ಶುರುವಾಯಿತು.. ಹುಡುಗರಿಗೂ ಆ ಲೆವೆಲ್ ಗೆ ಮಾನದ ಮೇಲೆ ಮರ್ಯಾದೆ ಭಯ ಇರತ್ತೆ ಅಂತ ನಂಗೆ ಗೊತ್ತಾಗಿದ್ದೆ ಅವಾಗ.. ಎರಡು ಸ್ಟಾಪ್ ಆದ್ರೆ ನಾನು ಇಳಿಬೇಕು ಆ ಗೊಗ್ಗಯ್ಯ ಯಾಕೋ ಹೆಂಗೆಂಗೋ ನೋಡ್ತಾ ಏನೇನೋ ಆಡ್ತಾ ಇದ್ದ ಒಂದೂವರೆ ಕಿಲೋಮೀಟರು ನಿರ್ಜನ ಪ್ರದೇಶದಲ್ಲಿ ಬಾಯಿ ಬಡ್ಕೊಂಡು, ಬೊಬ್ಬೆ ಹೊಡೆದರು ಕೇಳೋರು ಯಾರು ಇಲ್ಲಾ.. ಇವನೋ ದೈತ್ಯ ದೇಹಿ ನನಗೆ ಅಂತ ಚಳಿಯಲ್ಲು ಬೆವರು ಕಿತ್ಗೊಂದ್ ಕಿತ್ಗೊಂದ್ ಬರ್ತಿತ್ತು...
ಇವನ್ಯಾವನೋ ''ಗೇ'' ನೆ ಇರಬೇಕು ನನ್ನ ರೇಪ್ ಮಾಡಕ್ಕೆ ಬಂದ್ರೆ ಕೊಲೆ ಮಾಡಿ ಜೈಲು ಸೇರೋದೇ ಅಂತ ಡಿಸೈಡ್ ಮಾಡಿ ಧೈರ್ಯ ತೊಗೊಂಡು ಸುಮ್ನೆ ನಿಂತಿದ್ದೆ...!!
ಅವನೋ ಎಲ್ಲರನ್ನು ಬಿಟ್ಟು ನನ್ನೇ ನೋಡ್ತಾ ಇದ್ದ... ಕೇಳೋಕೆ ಮೀಟರ್ ಇಲ್ಲ.. ಯಪ್ಪಾ ಬ್ಯಾಡ ನನ್ ಪರಿಸ್ಥಿತಿ.. ಹುಡುಗರಿಗೂ ಆ ರೇಂಜ್ ಅಲ್ಲಿ ಶೀಲದ ಮೇಲೆ ಭಯ ಇರತ್ತೆ ಅಂತ ಅಂದ್ಕೊಂಡಿರಲಿಲ್ಲ.. ಪಾಪ ನಮ್ ಹೆಣ್ಮಕ್ಳು..!!
ಸದ್ಯ ದೇವರು ದೊಡ್ಡವನು ನಾನು ಇಳಿಯೋ ಹಿಂದಿನ ನಿಲ್ದಾಣದಲ್ಲಿ ಆ ಗೊಗ್ಗಯ್ಯ ಇಳಿದು ಹೋದ ಆಸಾಮಿ.. ಅವಾಗ್ಲೇ ನಂಗೆ ಧೈರ್ಯ ಬಂದಿದ್ದು..!!
ಉಸ್ಸಪ್ಪ ಇದು ತುಂಬಾ ಸಿಲ್ಲಿ ಅನ್ನಿಸಿದ್ರೂ ಆ ಟೈಮ್ ನಲ್ಲಿ ನನ್ನ ಕತೆ ಯಾವ್ದಾದ್ರು ಮೋಹಿನಿಗೆ ಪ್ರೀತಿ ಆಗ್ಬೇಕು..!!

Wednesday, 30 January 2013

ಆಗ ಸಮಯ ರಾತ್ರಿ ಸುಮಾರು ಒಂಬತ್ತು ಮುಕ್ಕಾಲು ಇರಬಹುದು..
ಹೈ ಹೀಲ್ಡ್ ಶೂ, ಟೈಟ್ ಜೀನ್ಸ್, ಟೀ ಶರ್ಟು, ಕಣ್ಣಿಗೆ ಬ್ಲೂ ಲೆನ್ಸು , ಕರ್ಲಿ ಕೂದಲು, ತುಟಿಗೆ ಕೆಂಪು ಬಣ್ಣದ ಲಿಪ್ ಸ್ಟಿಕ್ ಒಂದು ಕೈಯಲ್ಲಿ ಬ್ಯಾಗು, ಇನ್ನೊಂದು ಕೈಯಲ್ಲಿ ಮೊಬೈಲ್ ಫೋನ್ ಹಿಡಿದ ಒಂದು ಸುಂದರ ಹುಡುಗಿ ಬಸ್ ಸ್ಟಾಪ್ ನಲ್ಲಿ ಬಸ್ಸಿಗೆ ಕಾಯ್ತಾ ಇದ್ದಳು...!!
ಬಸ್ ಸ್ಟಾಪಿನಲ್ಲಿ ಹರಟುತ್ತ ಕುಳಿತಿದ್ದ ಹುಡುಗರು ಅವಳನ್ನೇ ಗಮನಿಸುತ್ತಿದ್ದರು..!!
ಇದನ್ನು ಕಂಡು ಅವಳು ಮತ್ತಷ್ಟು ದಿಗಿಲುಗೊಂದಳು..!!
ನಾನೊಬ್ಬಳು ಫೆಮಿನಿಸ್ಟ್, ಯಾವುದಕ್ಕೂ ಹೆದರೋಲ್ಲಾ, ಏನೇ ಕಷ್ಟ ಬಂದರೂ ಎದುರಿಸುತ್ತೀನಿ, ನಾವು ಯಾವುದಕ್ಕೂ ಕಮ್ಮಿ ಇಲ್ಲಾ ಈ ಪುರುಷ ಪ್ರದಾನ ಸಮಾಜದಲ್ಲಿ, ಹಾಗೇ ಹೀಗೇ ಎಂದು ಉದ್ದುದ್ದ ಭಾಷಣ ಮಾಡಿ ಚಪ್ಪಾಳೆ ಗಿಟ್ಟಿಸಿಕೊಂಡಿದ್ದ ಆ ಹೆಣ್ಣು ಆ ನಿರ್ಜನ ರಾತ್ರಿಯಲ್ಲಿ ಚಳಿಯಲ್ಲಿಯೂ ಬೆವರ ತೊಡಗಿದ್ದಳು..
" ರಾತ್ರಿ ಇಲ್ಲೇ ಇದ್ದು ಬೆಳಿಗ್ಗೆ ಮನೆಗೆ ಹೋಗು, ಇರೋದು ಒಂದು ಬಸ್ಸು, ಆಟೋಗಳು ಕೂಡ ಸಿಗೋಲ್ಲ.." ಎಂದ ಹಿತೈಷಿಗಳ ಮಾತನ್ನೂ ಕಡೆಗಣಿಸಿ ",,
"ಕೇವಲ ಹತ್ತು ಕಿಲೋಮೀಟರು ಅಷ್ಟೇ ತಾನೇ ನಾನೇನು ಭಯಪಡಲು ಹಿಂದಿನ ಕಾಲದ ಹುಡುಗಿಯೇ?" ಎಂದು ಹಟದಿಂದ ಉತ್ತರಿಸಿ ಬಂದು, ರಾತ್ರಿ ಹತ್ತು ಗಂಟೆಯ ಬಸ್ಸನ್ನು ಕಾಯುತ್ತ ನಿಂತಿದ್ದ ಅವಳಿಗೆ ಈಗಿನ ಒಂದೊಂದು ಕ್ಷಣವೂ ಒಂದೊಂದು ಯುಗಗಳಂತೆ ಭಾಸವಾಗತೊಡಗಿತು..!!
"ಮಹಿಳೆ ಪುರುಷರಿಬ್ಬರೂ ಸಮಾನರು, ಪುರುಷರಿಗಿಂತಾ ನಾವೇ ಎಲ್ಲಾ ವಿಷಯದಲ್ಲೂ ಮೇಲು, ಅವರಿಗೆ ನಾವು ಹೆದರುವ ಅವಶ್ಯಕತೆ ಏನು?? ನಮಗೂ ಅವರಿಗಿಂತ ಜಾಸ್ತಿ ದೃಡತೆ ಶಕ್ತಿ ಎಲ್ಲಾ ಇದೆ, ಆದರೂ ಈ ಹೆಣ್ಮಕ್ಕಳು ಯಾಕೇ ಹೆದರಿ ಸಾಯ್ತಾರೋ" ಅಂತ ಸಹಚರರ ಎದುರಿಗೆ ವಾದಿಸುತ್ತಿದ್ದ ಅವಳ ವಿಶ್ವಾಸ, ಆಕ್ರೋಶ ಯಾವುದೂ ಆ ಸಮಯಕ್ಕೆ ಅವಳ ಸಾಂತ್ವನಕ್ಕೆ ಬರಲೇ ಇಲ್ಲ..!! ಮನಸ್ಸಿನಲ್ಲಿ ಬರಿಯ ನಕಾರಾತ್ಮಕ ಯೋಚನೆಗಳೇ ಬರ ತೊಡಗಿದವು.. ಪೇಪರ್ ಅಲ್ಲಿ ಓದಿದ್ದು, ಟಿವಿ ಯಲ್ಲಿ ನೋಡಿದ್ದು, ಅತ್ಯಾಚಾರ ಕೊಲೆ ಇವೆ ಅವಳ ತಲೆಯೊಳಗೆ ಸುಳಿದಾಡಿ ಅವಳನ್ನು ಇನ್ನಷ್ಟು ಜರ್ಜರಿತಗೊಳಿಸಿತ್ತು..!!
ಆ ಹುಡುಗರು ಕುಳಿತಲ್ಲಿಂದ ಎದ್ದು ಇವಳ ಹತ್ತಿರವೇ ಬರತೊಡಗಿದರು..
ಅವಳ ಕೈ ಕಾಲುಗಳು ಒಂದೇ ಸಮನೆ ನಡುಗತೊಡಗಿತು.. ಅವಳ ಧೈರ್ಯ ಸಿಟ್ಟು ಅಕ್ರೋಶ ಎಲ್ಲವೂ ಆ ಸಮಯದಲ್ಲಿ ಯಾವ ದೇಶದ ಗಡಿ ದಾಟಿತ್ತೋ ಆ ದೇವರಿಗೆ ಗೊತ್ತು..
ಇನ್ನಸ್ಟು ಹತ್ತಿರ ಬಂದ ಹುಡುಗರಲ್ಲಿ ಒಬ್ಬನು ಅವಳನ್ನು ನೋಡಿ, ಅವಳ ಮುಕದ ಹತ್ತಿರ ಕೈ ಹಿಡಿದು...
.
.
.
.
.
.
.
.
.
.
.
.
.
.
.
" ಸಿಸ್ಟರ್ ಬಸ್ಸು ಬಂತು ಹತ್ತಿ... ಇದು ಕೊನೆ ಬಸ್ಸು, ಯಾವ್ದೋ ಚಿಂತೇಲಿ ಇರೋ ಹಾಗಿದೆ, ಬಸ್ಸು ಮಿಸ್ಸು ಮಾಡ್ಕೋಬೇಡಿ ಬನ್ನಿ ಹತ್ತಿ"
ಎಂದಾಗಲೇ ಅವಳು ವಾಸ್ತವಿಕತೆಗೆ ಮರಳಿದಳು.. ಅವಳಿಗೆ ಗೊತ್ತಾಗದ ಹಾಗೇ ಆ ಹುಡುಗನ ಕೈ ಹಿಡಿದುಕೊಂಡು ಬಸ್ಸನ್ನ್ನೇರಿದಳು..!!

Monday, 21 January 2013

ಪ್ರೇಮ ಪತ್ರ

ಇದು ನನ್ನ ತುಂಬಾ ಪ್ರೀತ್ಸೋ ಹುಡುಗಿ ಬರೆದಿದ್ದ ಪತ್ರ..!! ಹಾಳಾದ್ದು ನನ್ ಕೈಗೆ ಸಿಕ್ಕಬೇಕಾ??

ಲೋ ಚಚ್ಚಿ... 
ಥೂ ನಂಗೆ ಈ ಪತ್ರ ಗಿತ್ರ ಎಲ್ಲ ಗೊತ್ತಿಲ್ವೋ.. ಆದ್ರೂ ನಿನಗೆ ನನ್ನ ಭಾವನೆಗಳನ್ನ ಡೈರೆಕ್ಟ್ ಆಗಿ ಹೇಳೋಕೆ ಆಗ್ತಿಲ್ಲ.. ನೀನು ನಂಗೆ ತುಂಬಾ ಕಾಡಿದ ಹುಡುಗಾ... ನಂಗೆ ತುಂಬಾ ಹಿಡಿಸಿದ ಹುಡುಗಾ..ಫೇಸ್ ಬುಕ್ ಅಲ್ಲಿ ಆದ ಸ್ನೇಹ ಈ ಲೆವೆಲ್ ಗೆ ನನ್ ಲೈಫ್ ಫೆಸ್ ಮಾಡ್ಬೇಕು ಅಂತ ನಾನು ನಿಜವಾಗಲು ತಿಳ್ಕೊಂಡಿರ್ಲಿಲ್ಲಾ.. ಎಷ್ಟೊಂದು ಜನ ನಂಗೆ ಸ್ನೇಹಿತರು ಸ್ನೇಹಿತೆಯರು ಇದ್ರೂ ಕೂಡ ನೀನ್ಯಾಕೆ ಅವರನ್ನೆಲ್ಲ ಮೀರಿ ಏನೋ ಸ್ಪೆಷಲ್ ಆಗ್ಬಿಟ್ಟೆ.. ?? ನಿಜವಾಗ್ಲೂ ನನಗೆ ನನ್ನ ಮನಸ್ಸನ್ನ ಕಂಟ್ರೋಲ್ ಮಾಡೋದೇ ಒಂದು ತಪಸ್ಸು ಆಗೋಗಿದೆ.. ಆದ್ರೂ ಅದರಲ್ಲೇನೋ ಮಜಾ ಇದೆ..!!
ಎಲ್ಲಾ ಬಾಯ್ಸು ಒಂದೇ ಥರ.. ನೀವು ಹುಡುಗ್ರು ಯಾಕೆ ಹುಡುಗಿರನ್ನ ಅರ್ಥನೇ ಮಾಡ್ಕೊಳ್ಳಲ್ಲಾ.. ಮೊದಲ ಸಲ ತುಂಬಾ ಕೇರು ತೊಗೊಳೋ ನೀವು ಸ್ನೇಹ ಹಳೇದಾದಂಗೆ ನಾವು ಬೇಡದವರಾಗುತ್ತೀವಿ ಅಲ್ವ?? ಮೊದಮೊದಲು ಎಲ್ಲಾನು ಶೇರ್ ಮಾಡ್ಕೊಳ್ಳೋ ನೀವು ಕೊನೆಕೊನೆಗೆ ನಮ್ಮನ್ನ ಬೇರ್ ಮಾಡೋದು ನಿಮಗೆ ಕಷ್ಟ ಅಲ್ವ? ನಾವು ಮಾಡ್ಕೊಳೋ ಮೇಕಪ್ ಬಗ್ಗೆ ಕಮೆಂಟ್ ಕೊಡೊ ನೀವು ಮೇಕಪ್ ಇಲ್ದೆ ಇರೋ ಹುಡುಗಿಯರನ್ನ ಯಾಕ್ರೋ ನೋಡಲ್ಲಾ..?? ಎಲ್ಲಾ ಹುಡುಗರನ್ನು ಲೈನ್ ಆಗಿ ನಿಲ್ಲಿಸಿ ಪಟಾಪತಾ ಅಂತ ಹೊಡಿಬೇಕು ಅನ್ನಿಸತ್ತೆ..!! ಆದರೆ ಏನ್ ಮಾಡೋದು.. ಅದರಲ್ಲೂ ಮಜಾ ತೊಗೊಳ್ಳೋ ಕಮಂಗಿಗಳು ನೀವು..!!
ಇಷ್ಟಾದರೂ ನಾವು ನಿಮ್ಮಂಥ ಗೂಬೇಗಳನ್ನೇ ಯಾಕೆ ಇಷ್ಟ ಪಡ್ತೀವಿ..?? ನೋಯಿಸಿದ್ರೂ ಅದರಲ್ಲೇ ಕುಷಿ ಪಡ್ತೀವಿ..!! ನಿನಗೆ ಗೊತ್ತ ಸಚಿನಾ ನಂಗೆ ನಿನ್ನ ಮೆಲಿದ್ದಿದ್ದು ನೀನು ಹೇಳೋ ತರ affection ಆಗಲಿ attraction ಆಗಲಿ ಅಲ್ಲ ಕಣೋ.. ಅದು ಲವ್ ಅಂಡ್ ಲವ್ ಅಷ್ಟೇ..!! ನಿನಗೋಸ್ಕರ ನಾನು ಏನೆಲ್ಲಾ ಮಾಡಿಲ್ಲಾ ನಮ್ಮ ಅಮ್ಮನ ಹತ್ರಾನು ಸೂಕ್ಷ್ಮವಾಗಿ ಚರ್ಚಿಸಿದ್ದೆ.. ನಿನಗೆ ನೇರವಾಗಿ ಹೇಳಕ್ಕೆ ಆಗದೆ ಎಷ್ಟೊಂದು ಸಲ ವ್ಯರ್ಥ ಪ್ರಯತ್ನ ಮಾಡಿದ್ದೆ.. ಆಗ್ಲೂ ನಿಂಗೆ ಗೊತ್ತಾಗಿರಲಿಲ್ವ ಅಥವಾ ಗೊತ್ತಿದ್ದೂ ನಾಟಕ ಮಾಡ್ತಾ ಇದ್ದೀಯ ಅನ್ನೋದು ನಂಗೆ ಈಗಲೂ ಪ್ರಶ್ನೆ ಆಗಿಯೇ ಉಳಿದಿದೆ..!! ಕೊನೆಗೆ ನಿನಗೆ ಡೈರೆಕ್ಟ್ ಆಗಿ ನಾನೇ ಪ್ರೊಪೋಸ್ ಮಾಡಿದ್ರು ಕೂಡ ಯಾಕೆ ನೀನು ಸಿರಿಯಸ್ ಆಗಿ ತೊಗೊಂಡೆ ಇಲ್ಲಾ??
ನಮ್ಮಂಥ ಹುಡುಗಿಯರ ಹಾರ್ಟು ಗಾಜಿನ ಮನೆ ತರ ನೋಡೋವ್ರಿಗೆಲ್ಲ ಚೆನ್ನಾಗೆ ಕಾಣ್ಸತ್ತೆ... ಅದರ ಮೈಂಟೈನ್ ಕಷ್ಟ ನಮಗೆ ಗೊತ್ತು..!! ಕಲ್ಲು ಹೊಡ್ಯೋಕೆ ಎಲ್ಲಾ ಕಾಯ್ಕೊಂಡು ಇದ್ರೂ ಕಾಪಾಡಕ್ಕೆ ಇರೋರತರ ಕೆಲವರ ಪೋಸು ಬೇರೆ..!! ನನ್ನ ಬಗ್ಗೆ ನಾನು ಯೋಚಿಸಲ್ಲ ನಂದು ಹೆಂಗೋ ಹಾಳಾಗೋಗ್ಲಿ.. ಬಹುತೇಕ ಎಲ್ಲಾ ಹುಡುಗಿಯರ ಪರಿಸ್ಥಿತಿ ಇದಕ್ಕಿಂತ ಏನು ಭಿನ್ನ ಇಲ್ಲ.. ನಾವು ಇಷ್ಟ ಪಟ್ಟಿದ್ದು ಕೊನೆಗೂ ಸಿಗೋದೆ ಇಲ್ಲಾ.. ಬೇರೆಯವರ ಸಂತೋಷದಲ್ಲೇ ಕುಷಿಪಡುವ ಅನಿವಾರ್ಯತೆ..!!
ರಾತ್ರಿ ಏಕಾಂಗಿಯಾಗಿ ಅತ್ತು ಅತ್ತು ತೋಯಿಸಿದ ದಿಂಬುಗಳನ್ನ ಕೇಳಿ.. ಕಣ್ಣಿರಲ್ಲೇ ಒದ್ದೆ ಆದ ಕೆನ್ನೆ ಮೇಲಿನ ಪೌಡರ್ ನ ಕೇಳಿ ಇಲ್ಲಾ ಕಪ್ಪು ಕಾಡಿಗೆಯನ್ನ ಕೇಳಿ.. ಒಡೆದ ಬಳೆನ ಕೇಳಿ.. ಸಿಟ್ಟಲ್ಲಿ ಬಿಸಾಡಿದ ಹಳೆಯ ವಸ್ತುಗಳನ್ನ ಕೇಳಿ..!!ಇವು ಎಲ್ಲಾ ಹುಡುಗಿಯರ ಕರ್ಮ ಕಾಂಡಗಳನ್ನ ಅಳು ಅಳುತ್ತ ಹೇಳ್ತಾವೆ..!! ನಿಮಗಿಂತ ನಾವು ಹುಡುಗಿಯರೇ ಎಷ್ಟೋ ಧೈರ್ಯಶಾಲಿಗಳು.. ಅದು ಎಷ್ಟೋ ಕೇಸ್ ಅಲ್ಲಿ ಪ್ರೊವ್
ಕೂಡ ಆಗಿದೆ.. ಆದ್ರೂ ನೀವು ಹುಡುಗಿಯರ ಮನಸ್ಸನ್ನ ಅರ್ಥ ಮಾಡ್ಕೋಳೋದೇ ಇಲ್ಲ ಅಲ್ವ?? ಹೋಗ್ಲಿ ಇದ್ರಲ್ಲಿ ನಿಮ್ಮದು ತಪ್ಪು ಅಂತಾನು ಹೇಳೋಕೆ ಆಗೋಲ್ಲ ನಾವೇ ಹುಡುಗಿಯರು ಸರಿ ಇಲ್ಲದೆ ಇರಬಹುದು..!!
ಲೋ ನಿಂಗೆ ಬೈಬೇಕು ಹೊಡಿಬೇಕು ಎಲ್ಲಾ ಅನ್ಸತ್ತೆ ಆದ್ರೂ ನೀನ್ ಎದುರಿಗೆ ಬಂದ್ರೆ ಎಲ್ಲಾ ಮರೆತು ಹೋಗತ್ತೆ.. ನೀನ್ ನನ್ನ ಲವ್ ಮಾಡಲ್ಲ ಅಂತ ಹೇಳಿದ್ದಕ್ಕೆ ನನಗೇನು ಬೇಜಾರಿಲ್ಲ ಕಣೋ ಆದ್ರೂ ನಂದು ಲವ್ ಅಲ್ಲಾ ಅಂದ್ಯಲ್ಲ ಅದು ತುಂಬಾನೇ ಬೇಜಾರಾಗಿದ್ದು..!! ನಿನ್ ಲೈಫು ನಿನ್ನ ಗುರಿ ನೀನ್ ಚೆನ್ನಾಗಿರು.. ಆದ್ರೂ ನೀನು ನನ್ನ ಪ್ರೀತಿಯ ಹುಡುಗಾ ಅಷ್ಟೇ..!!
ಮುಂದೆ ನಿಂದೆ ಬೇರೆ ಲೈಫು ನಂದೇ ಬೇರೆ ಲೈಫು..ಇಬ್ರೂ ಒಂದಾಗೋದು ಬಹುತೇಕ ಅನುಮಾನ ಆದರು ಸರೀನೆ.. ಇಷ್ಟು ದಿನ ನೀನು ನನ್ನ ಒಳ್ಳೆ ಗೆಳೆಯ ನನ್ನ ಅಪ್ಪ ಅಮ್ಮನಿಗಿಂತ ನೀನೆ ಎಷ್ಟೊಂದ್ ಸಲ ಮೇಲು ಅಂತ ಅನ್ನಿಸಿದ್ದು ಇದೆ.. ಹಾಗಂತ ಇದೆ ಸರಿಯಂತಲ್ಲ..!! ಮುಂದೆ ಎಂದಾದರೂ ನೀನು ನಿನ್ನ ಹೆಂಡತಿ ಮಕ್ಕಳ ಜೊತೆ ನಾನು ನನ್ನ ಫ್ಯಾಮಿಲಿ ಜೊತೆ ಇದ್ದಾಗ ನೋಡಿದರು, ಯಾರೋ ಇವಳು ಗೊತ್ತೇ ಇಲ್ಲ ಅನ್ನೋ ತರ ಮಾತ್ರ ಇರಬೇಡ್ವೋ.. atleast ಒಂದುಸಲ ಆದ್ರೂ ಹೇಗಿದ್ದೀಯ ಅಂತ ಮಾತಾಡ್ಸೋ ಪ್ಲೀಸ್...
Anyhow I LOVE U always ಕಣೋ..
I Really Miss U so much ..!!