Sunday 28 April 2013


ಇವ ಸುಮ್ನೇ ಗೀಚ್ತಾನೆ, ಸೀರಿಯಸ್ ಆಗ್ಬೇಡಿ…

ಅದೊಂದು ಕಾಲವಿತ್ತು. ಗುರುಗಳು ಎಂದರೆ ಸಾ
ಕ್ಷಾತ್ ದೇವರೇ ಎಂಬ ಭಾವನೆ ಜನರಲ್ಲಿತ್ತು. ’ಹರ ಮುನಿದರೂ ಗುರು ಕಾಯ್ವನು’ ಎಂಬಾ ನಂಬುಗೆಯಿತ್ತು. ಮೇಲಾಗಿ ಗೌರವವಿತ್ತು, ಆದರವಿತ್ತು. ಆದರೆ,,, ಕಾಲ ಬದಲಾಯ್ತೋ, ಜನರೇ ಚೇಂಜ್ ಆದ್ರೋ ಗೊತ್ತಾಗ್ಲಿಲ್ಲಾ, ಗುರು ಅನ್ನೋ ಪದವೇ ಇಂದು ಏನೇನೋ ಆಗೊಗಿದೆ. "ಬಾ ಗುರು’, "ತೊಗೋ ಗುರು", "ಮಗಾ ಹೊಡಿ ಗುರು" ಮುಂತಾದ ಪದಗಳನ್ನ ನಿಮ್ಮಾ ಆಸುಪಾಸಲ್ಲಿ ಕೇಳದ ಕಿವಿಗಳಿದ್ರೆ,  ಅದಕ್ಕೆರಡು ಲೀಟರ್ ಚಿಮಣಿ ಎಣ್ಣೆ ಹಾಕಿಸಿ ಕಿಲಿನು ಮಾಡಿಸಿ, ಪುಣ್ಯ ಕಟ್ಕಳಿ. ವಿದ್ಯಾ ಗುರುಗಳನ್ನೂ ಅವನು ಇವನು ಅಂತಾ ಮಾತಾಡಿಸೋ ವಿಧ್ಯಾರ್ಥಿಗಳಿಗೇನು ನಮ್ಮಲ್ಲಿ ಬರವೇ?
ಸರಿ ಪದಗಳನ್ನೇನೋ ಗಬ್ಬೇಬ್ಬಿಸಿದ್ದಾಯು,,! ಇನ್ನು ಗುರುವಿನ ಅರ್ಥವಾದರೂ ಅರ್ಥಬದ್ಧವಾಗಿ ಅರ್ಥವಾಗೋತರ ಇದೆಯಾ ಅಂತ ನೋಡಿದರೆ ಅಲ್ಲೂ ಕೂಡಾ ಅರ್ಥ ಅನರ್ಥವಾಗಿ ಅಪಾರ್ಥದ ಪಾತ್ರದೊಳU, ಪತ್ತರದ ಏಟು ತಿಂದ ಪತಂಗದ ತರ ಪತಪತಾ ಅಂತ ಬಿದ್ದು ಒದ್ದಾಡುವುದ ನೋಡಿದ ಕಣ್ಣುಗುಡ್ಡೆಗಳೂ ಸಹ ಜಿಗುಪ್ಸೆಗೊಂಡು ದಯಾಮರಣಕ್ಕೆ ಅರ್ಜಿ ಗುರಾಯಿಸಿದಂತಹ ಅನುಭವವಾದರೆ ಅದರಲ್ಲೇನು ತಪ್ಪಿಲ್ಲ ಅನ್ನಿಸುತ್ತದೆ. ಯಾಕಂದ್ರೆ ಮೊದಲೆಲ್ಲಾ ಗುರು ಅಥವಾ ಧರ್ಮಗುರು ಅನ್ನಿಸಿಕೊಳ್ಳಬೇಕಾದರೆ ತುಂಬಾ ನಿಷ್ಟೆ, ಅನುಷ್ಟಾನ, ಅಪಾರ ಜ್ಞಾನ, ಅಷ್ಟೇ ಮನೋಹಿಡಿತ, ಎಲ್ಲಾ ಆಸೆ-ಆಕಾಂಕ್ಷೆಗಳನ್ನ ನಿಗ್ರಹಿಸಿ ದೀಕ್ಷೆ ಪಡೆಯಬೇಕಾಗಿತ್ತು, ಅದರಂತೆ ನಡೆಯಬೇಕಾಗಿತ್ತು ಕೂಡಾ. ಆದರೇ ಇಂದು????
ಅವನ್ಯಾವನೋ ಗುರು ಅಂತೆ..! ಅವನ ಬಾಲವಿರದ ಹಿಂಬಾಲಕರೆಲ್ಲಾ ಬಲ್ಗೇರಿಯನ್ ದೆವ್ವ ಮೆಟ್ಗೊಂಡ ತರ ಎಗರಿ ಎಗರಿ ಕೂರ್‍ತಾರೆ, ಫಾರಿನ್ ಪಿಗರ್‌ಗಳನ್ನೇಲ್ಲಾ ಶಿಷ್ಯೆ ಮಾಡಿಕೊಂಡು, ಬಾಯ್ತುಂಬಾ ಚೆನ್ನಾಗಿ ಇಂಗ್ಲಿಷ್ ಮಾತಾಡ್ಕೊಂಡು, ನಮ್ಮ ಸನ್ನಿ ಲಿಯೋನಿಗೂ ಏನೂ ಕಮ್ಮಿ ಇಲ್ಲದತರ ತಮ್ಮ ಅಗಾಧ ಶ್ರಮವನ್ನೆಲ್ಲಾ ಧಾರೆ ಎರೆದಿದ್ದಾರೆ ಎನ್ನುವ ’ಗುರು’ತರ ಆರೋಪದಲ್ಲಿ ಸಿಕ್ಕಾಕ್ಕೊಂಡು, ಆಗಾಗ ಜೈಲಿಗೆ ಹೋಗಿ ಬರೋದ್ರಲ್ಲೇ, ಕೋರ್ಟು-ಸ್ಟೇಷನ್ನು ಅಂತಾ ಅಲೆಯೋದ್ರಲ್ಲೇ ತಮ್ಮ ಅಮೂಲ್ಯ ಜೀವನವನ್ನ ’ಗುರು’ ಎನ್ನುವ ಪದ ಹಾಗೂ ನಂಬಿಕೆಯ ಜೊತೆಯೇ ಕಳೆಯುತ್ತಿರುವ ಕಾಮಿಸ್ವಾಮಿ ನಮಗ್ಯಾರಿಗೂ ಅಪರಿಚಿತನೇನಲ್ಲಾ..!
ಮತ್ತೊಬ್ಬ, ಗುರುಜೀ ಅಂತಾ ಹೇಳ್ಕೊತಾನೆ. ತನ್ನ ಹೊಟ್ಟೆಯನ್ನೇ ಬ್ರಂಹ್ಮಾಡ ಮಾಡ್ಕೊಂಡಿದಾನೆ. ಇರೊ ಬರೋ ಹೆಣ್ಮಕ್ಳ ಬಗ್ಗೆ ಬಾಯ್ತುಂಬಾ ಒಳ್ಳೋಳ್ಳೆ ಕರ್ಣಕಠೋರ ಅಣಿಮುತ್ತುಗಳನ್ನ ತೂಕಡಿಸುತ್ತಾ ಉದುರಿಸುವುದು ಇವನ ಚಾಳಿ. ಆಗ್ಗಾಗ್ಗೆ ಆಗದಿರುವ ಬಗ್ಗೆ ಹೇಳ್ಕೋತಾ ಎಲ್ಲರನ್ನು ಭಯಬೀಳಿಸುತ್ತಾ ಭವಿಷ್ಯ ಹೇಳೋದೇ ಇವನ ಕಾಯಕ. ದೇವಿ ಇವನ ಕನಸಲ್ಲಿ ಬರುತ್ತಾಳಂತೇ, ಏನೇನೋ ಹೇಳ್ತಾಳಂತೆ. ಜನ ನೋಡದಿದ್ದರೂ ದೂರದರ್ಶನದಲ್ಲಿ ಮಕತೋರಿಸೋ ಅದಮ್ಯ ಆಸೆ ಹೊಂದಿದ್ದು ’ಪೊಳ್ಳು ಮಾತುಗಳೇ ಹೊಟ್ಟೆ ತುಂಬಿಸುತ್ತವೆ, ಅದನ್ನು ಕೇಳಲೆಂದೇ ಜನರಿದ್ದಾರೆ’ ಎಂಬುದು ಇವನ ಬಲವಾದ ನಂಬಿಕೆ. ಅದಕ್ಕೆಂದೇ ರಿಯಾಲಟಿ ಶೋ ದಲ್ಲಿಯೂ ಬಾಡಿ ಬ್ರಂಹ್ಮಾಡ ತೊರಿಸುತ್ತಾ ಸ್ವಿಮ್ಮಿಂಗ್ ಪೂಲ್ ನಲ್ಲಿ ಈಜಾಡ್ಕೋಂಡು ಅವಾಗಾವಾಗ ಹೀರೊಯಿನ್ನ್ ಕೈಯಿಂದ ಮಸಾಜ್ ಮಾಡಿಸಿಕೊಳ್ಳೋ ಇವನು ಸಾಮಾನ್ಯ ಮನುಷ್ಯನೇ ಅಲ್ಲಾ ಅನ್ನೋದು ಅವನ ಬಗ್ಗೆ ತಿಳಿದವರ ಆಂಬೋಣ.
ಇಷ್ಟಕ್ಕೇ ಮುಗಿಯುವುಯದಿಲ್ಲ ಕಳ್ಳಗುರುಗಳ ಕರುಮಕಾಂಡ. ಇಲ್ಲಿ ಮತ್ತೊಬ್ಬನನ್ನು ಉದಾಹರಿಸಲೇ ಬೇಕು. ಅವನು ಕೂಡಾ ಗುರುವಂತೆ, ಸವಾಮಿಯಂತೆ..! ಅವನಾಟ ನೋಡಲು ನಮಗೆ ಎಲ್ಡಲ್ಲ-ನಾಲ್ಕೆಂಟು ಕಣ್ಣುಗಳು ಇದ್ದಿದ್ದರೂ ಶಾರ್ಟೇಜ್ ಬಿದ್ದಿತೇನೋ ಅನ್ನುವ ಗುಮಾನಿ ಕಾಡತ್ತೆ. ಟೀವಿಯಲ್ಲಿ ಠೀವೀಯಿಂದ ನಾಚಿಕೆಬಿಟ್ಟು ನಡೆದುಕೊಳ್ಳೋ ಆವಯ್ಯ ಯಾವ ಟೀಕೆಗೂ ಜಗ್ಗದ ಭಲೇ ನಾಟಕಕಾರ. ಆ ಮನುಷ್ಯ ಕುಂತರೇ ಕಾಳಿ ಅಂತೆ, ನಿಂತರೇ ಭದ್ರ್ರಕಾಳಿಯಂತೆ, ಎದೇ ಮೇಲೇ ತಕದಿಮಿ ಎಂದು ಕಾಳಿಯನ್ನೇ ಕುಣಿಸುತ್ತಾನಂತೆ. ಅವನೇನು ಕಾಳಿ ಆಂತಂದ್ರೆ ಅವನು ಸಾಕಿರೋ ಕೋಳಿ ಎಂದುಕೊಂಡಿದ್ದಾನೋ ಹೇಗೇ? ಕಾಂಟ್ರವರ್ಸಿ **ಮಗ ಎಂದು ಬೇರೆಯವರು ಹೇಳುತ್ತಿದ್ದರೂ, ತಲೆಕೆಡಿಸಿಕೊಳ್ಳದೇ, ನಾಚಿಕೆಪಟ್ಟುಕೊಳ್ಳದೇ ತನ್ನ ಕಾರ್ಯದಲ್ಲಿ ಮುಳುಗೇಳುತ್ತಾ, ’ನಾನೂ ಸೂಪರ್ರೂ ರಂಗಾ….’ ಎಂದು ಹಾಡುತ್ತಾ, ಹುಡುಗಿಯರ ಕೈ ಹಿಡಿದು ಕುಣಿಯುವುದರಲ್ಲೇ ಇವನು ತಲ್ಲೀನ.
ಸುದ್ದಿವಾಹಿನಿಯೊಂದರಲ್ಲಿ ಮಕಕ್ಕೆ ಸರಿಯಾಗಿ ಮಂಗಳಾರತಿ ಮಾಡಿಸಿಕೊಂಡು, ಗಳಗಳನೇ ಅತ್ತು ಕಾವಿ ಕಳಚುತ್ತೇನೆಂದು ಹೇಳಿಕೆ ಕೊಟ್ಟು ಕಳೆದುಹೋಗಿದ್ದ ಈ ಕೋಳೀ ಸ್ವಾಮಿ ಮತ್ತೆ ಗುರು ಹೆಸರಲ್ಲಿ ಮಕ ತೊರಿಸುತ್ತಿರುವುದು ನೋಡಿ ಬ್ಯಾಲೆನ್ಸ ಉಳಿದ ನಮ್ಮೆಲ್ಲರ ಜನ್ಮಗಳೆಲ್ಲಾ ಪಾವನವಾದವು. ಅವನು ಅವಕಾಶವಾದಿಯಂತೆ, ಕ್ಯಾಮರಾ ಮುಂದೆಯೇ ಆಟವಾಡುತ್ತಾನಂತೆ. ಮೊದಲಿನಂತೇ ನಾಟಕ, ನೃತ್ಯ ಮಾಡಿಕೊಂಡು ಇದ್ದ ಹೊಟ್ಟೆತುಂಬಿಸಿಕೊಲ್ಲುವುದ ಬಿಟ್ಟು ಗುರುವಾಗು ಎಂದು ಹೇಳಿದವರಾರೋ? ಇದಕ್ಕೆ ಸರಿಯಾಗಿ ಗುರು ಎಂದು ಹೇಳಿಸಿಕೊಂಡ ಮೇಲೂ ಆ ಸ್ಥಾನಕ್ಕೆ ಕಳಂಕ ತರುತ್ತಿರುವುದು ನಿಜಕ್ಕೂ ಖೇಧಕರ.  
ಗುರುವು ಸಮಾಜೋದ್ಧಾರಕ್ಕೆ ಆಶಾವಾದಿಯಾಗಿರಬೇಕೇ ಹೊರತು ಅವಕಾಶವಾದಿ ಖಂಡಿತ ಸಲ್ಲದು. ಚೋರ ’ಗುರು’ವಾಗಿದ್ದುಕೊಂಡು ಚಮಚಾಗಿರಿಯಲ್ಲಿಯೇ ಬಾಳು ಸವೆಸುವ ಇವರ ಬಿಕನಾಸಿ ಬಾಳಿಗೆ ಬತ್ತಿ ಇಟ್ಟು, ಕಷ್ಟಪಟ್ಟು ದುಡಿಯಲಿ. ಪೀಠ ರಾಜಕೀಯ ಎಲ್ಲಾ ಬದಿಗಿಟ್ಟು ಜನರ ಜೊತೆ ಸ್ವಂದಿಸುವ, ಸರಿಯಾದ ಮಾರ್ಗದರ್ಶನ ನೀಡುವ ಕೆಲಸ ಮಾಡಲಿ, ಎಲ್ಲಕ್ಕಿಂತ ಮೊದಲು ತಮ್ಮನ್ನು ತಾವು ನಿಯಂತ್ರಿಸಿಕೊಳ್ಳಲಿ. ಕರುಮಕಾಂಡದ ಕಳ್ಳಗುರುಗಳೇ ತುಂಬಿರುವ ಈ ನಮ್ಮ ಸಮಾಜದಲ್ಲಿ ನಿಜವಾಗಿಯೂ ಆದರ್ಶವಾಗಿರುವ ಗುರು ಇಲ್ಲವೆಂದಲ್ಲ. ಇದ್ದೇ ಇರುತ್ತಾರೆ. ಆದರೆ ಅವರು ಪಳಪಳ ಹೊಳೆವ ತಗಡಿನಂತಲ್ಲ. ಯಾವುದೇ ಮಿಶ್ರಣ ಮಾಡಿರದ ಶುದ್ದ ಚಿನ್ನದಂತೆ. ಅದೇನೇ ಇರಲಿ, ಕೆಲವು ಖದೀಮರಿಂದ, ಕಳ್ಳಗುರುಗಳಿಂದ ಎಲ್ಲಾ ಧಾರ್ಮಿಕ, ಸಾಮಾಜಿಕ ’ಗುರು’ ಪದವೇ ಸುಟ್ಟು ಕರಕಲಾಗುತ್ತಿರುವುದು ಮಾತ್ರ ವಿಪರ್ಯಾಸ, ಇದೇ ಸಧ್ಯದ ವಾಸ್ತವಿಕ.
-ಫ್ಲಾಪೀಬಾಯ್

Saturday 6 April 2013


ಮುದೀ ಯುವಕರು ....

ಮೊನ್ನೆ ಇಂಡಿಯ- ಆಸ್ಟ್ರೇಲಿಯ ಮ್ಯಾಚ್ ಅಲ್ಲಿ ನಮ್ಮವರು ಗೆಲ್ಲೋದನ್ನ ನೋಡ್ತಾ ಕೂತಿದ್ದೆ. ಅಷ್ಟರಲ್ಲಿ ನನ್ ಫ್ರೆಂಡ್ ಪುಡಾರಿ ಬಂದ. ಅವನ ನಿಜವಾದ ಹೆಸರು ಪುಂಡರೀಕ ಅಂತ.. ಓದೋದನ್ನ ಮೊಟಕುಗೊಳಿಸಿ ರಾಜಕೀಯ ಪಾಲ್ಟೀ, ಸಂಘಟನೆ, ಅದು ಇದು ಅಂತ ಏನೇನೋ ವ್ಯವಹಾರ ಮಾಡ್ತಾ ಕೆಲವು ರಾಜಕೀಯ ವ್ಯಕ್ತಿಗಳಿಗೆ ಬಕೇಟು ಹಿಡ್ಕೊಂಡು ಹೆಂಗೋ ಬದ್ಕಿದ್ದ. ಹಳೇ ಗೆಳೆಯ ಮೇಲಾಗಿ ರಾಜಕೀಯ ಸಾವಾಸ ಬೇರೇ, ಆದ್ರಿಂದ ನಮ್ಮೆಲ್ಲರ ಬಾಯಲ್ಲಿ ಅವನ ಹೆಸರು ಪುಂಡರೀಕನ ಬದಲಾಗಿ ಶಾರ್ಟ್ ಅಂಡ್ ಸ್ವೀಟ್ ಆಗಿ ಪುಡಾರಿ ಆಗೊಗಿದ್ದ. ಆ ಪುಡಾರಿ ಯಾವ ಗಳಿಗೇಲಿ ಕಾಲಿಟ್ನೋ ಅವಾಗ್ಲೇ ನಮ್ 'ಕ್ರಿಕೆಟ್ ಗಾಡು' ಒಂದು ರನ್ನಿಗೆ ಔಟಾಗಿ ಬಿಟ್ರು. ಛೇ ಅಂತ ನಾನು ಬೇಜಾರ್ ಮಾಡಿಕೊಂಡಿದ್ರೆ,
ಅತ್ಲಾಗೆ ಪುಡಾರಿದು ಸುರು ಆತು " ಥೋ ಇನ್ನು ವಯಸ್ಸಾಗಿರೋ ಮುದುಕರನ್ನ ಯಾಕಾದ್ರೂ ಆಡಿಸ್ತಾರೋ? ಸುಮ್ನೇ ಮನೇಲಿ ಕೂರಿಸಿ ಹೊಸ ಯುವಕರನ್ನ ಹಾಕ್ಕೊಬಾರ್ದ?? ಅವರಂತೂ ವಯಸ್ಸು ನಲವತ್ತಾದ್ರೂ ಆಡೋದು ಬಿಡಲ್ಲ. ಥೋ ಯಾರು ಹೇಳ್ಬೇಕಪ್ಪಾ ಇವರಿಗೆಲ್ಲಾ? ಅವರವರೇ ತಿಳ್ಕೊಂಡು ರಿಟೈರ್ಮೆಂಟ್ ತಗೋಬೇಕಿತ್ತು. ನಮ್ ದೇಶದ ಕತೆನೇ ಇಷ್ಟು..." ಅಂತ ಇನ್ನೂ ಮಾತು ನಿಲ್ಲಿಸಿರಲಿಲ್ಲಾ, ಅಷ್ಟರಲ್ಲೇ ನನಗೆ ಉರಿದೊಯ್ತು, ಮೊದ್ಲೇ ನಮ್ ಕ್ರಿಕೆಟ್ಟೇ ನನ್ ಧರ್ಮ, ಸಚಿನೇ ದೇವ್ರು ಅಂತ ಸಿರಿಯಸ್ ಆಗಿ ಆಟ ನೋಡ್ತಾ ಇದ್ರೆ, ಔಟ್ ಆಗಿರೋದನ್ನ ಹಿಯಾಳಿಸಿದ್ದೂ ಅಲ್ದೆ ನಮ್ ದೇವರಿಗೆ ರಿಟೈರ್ ಆಗೋಕೆ ಗೊತ್ತಾಗಲ್ಲ, 'ಮುದುಕಾ' ಅಂದಿದ್ದೂ ನನ್ನನ್ನೂ ಇನ್ನೂ ಕೆರಳಿಸಿತು.
"ಮಗಾ ಪುಡಾರಿ, ನಿಂಗೆ ಏನು ಗೊತ್ತು ಅಂತ ಹಲವಾರು ಕ್ರಿಕೆಟ್ ಪ್ರೇಮಿಗಳ ಆರಾಧ್ಯ ದೇವರ ಬಗ್ಗೆ ಹೀಗೆ ಇಲ್ಲ ಸಲ್ಲದ ಕಾಮೆಂಟ್ ಹೇಳೋದು? ಮುವ್ವತ್ತೊಂಬತ್ತು ವರ್ಷದ ಸಚಿನ್ ಮುದುಕಾ ಅಂತಾದ್ರೆ ನಲವತ್ತೊಂದರ ನಿಮ್ಮ ರಾಜಕೀಯ ವ್ಯಕ್ತಿ ಕೇಂದ್ರ ಮಟ್ಟದಲ್ಲಿ ನಿಮ್ ಪಾರ್ಟೀ ಯುವಕರ ಅಧ್ಯಕ್ಷಾನ ? ಅದು ಬೇಡಾ ನಲವತ್ತೈದರ ವ್ಯಕ್ತಿ ರಾಜ್ಯ ಮಟ್ಟದಲ್ಲಿ, ನಾನೇ ಯುವಕರ ಪ್ರತಿನಿಧಿ.. ಯುವಕರೇ ಒಂದಾಗಿ ನನ್ನ ಗೆಲ್ಲಿಸಿ ಅಂತೆಲ್ಲ ಭಾಷಣ ಮಾಡ್ತಾರಲ್ಲ ಅವರೆಲ್ಲ ಮುದುಕರಲ್ವ? ೪೦-೪೫ ಅವ್ರೇ ಯುವಕರು ಅಂದ್ರೆ ಇನ್ನೂ ೨೨-೨೫ ರ ಹರೆಯದ ನಾವೆಲ್ಲಾ ಪಾಪಚ್ಚಿ ಕಂದಮ್ಮಗಳ? ಇನ್ನೂ ಬಾಯಲ್ಲಿ ಫೀಡಿಂಗ್ ಬಾಟಲ್ ಇಟ್ಗೊಂಡು ವಿವೇಚನೆ ಕಳಕೊಂಡು ಈ ಹಾಳಾದ ರಾಜಕೀಯವೇ ಬೇಡಾ ಅಂತ ಸುಮ್ನೇ ಇರಬೇಕಾ? ವಯಸ್ಸು ಎಪ್ಪತ್ತು ದಾಟಿದ್ದರೂ ಹಲವಾರು ಹಗರಣಗಳನ್ನ ಮೈಮೇಲೆ ಎಳ್ಕೊಂಡು ತಪ್ಪು ಸಾಬೀತಾಗಿದ್ರೂ, ಜೈಲಿಗೆ ಹೋಗಿ ಬಂದಿದ್ರೂ, ಮಕದಲ್ಲಿ ಒಂದು ಚೂರು ವಿಷಾದನೇ ಇಲ್ದೇ ಪಾರ್ಟೀ ಇಂದ ಪಾರ್ಟೀಗೆ ಪಲ್ಟೀ ಹೊಡಿತಾ, ಸಿಕ್ಕಿದೇಲ್ಲಾ ಕಬಳಿಸಿ ಗುಡಾರದಂತ ಹೊಟ್ಟೆ ಹೊತ್ಗೊಂದು ನಡೆಯಕ್ಕೆ ಆಗದೇ ಇದ್ರೂ ಖುರ್ಚೀ ಕನಸು ಕಾಣುತ್ತ ಇರೋ ನಿಮ್ಮವರು ನಮ್ಮ ದೇಶದ ಯುವ ಶಕ್ತಿನಾ? ಯುವಕರು ಅಂತ ಹೇಳಿಕೊಳ್ಳೋ ನಿಮ್ಮ ಯಾವ ನಾಯಕರು ನಿಸ್ವಾರ್ಥತೆ ಇಂದ ಯುವಕರಿಗೋಸ್ಕರ ಏನು ಕೆಲಸ ಮಾಡಿ ಕೊಟ್ಟಿದ್ದಾರೆ ಅಥವಾ ನಿಮ್ಮ ರಾಜಕೀಯದಲ್ಲಿ ವಯಸ್ಸು ಶುರು ಆಗೋದೇ ನಲವತ್ತರ ನಂತರವೋ? ಯಾಕೆ ನಿಮ್ಮ ರಾಜಕೀಯದಲ್ಲಿ 'ಯುವಕರಿಗೆ ಆದ್ಯತೆ' ಅನ್ನೋ ಎಲ್ಲಾ ಪಕ್ಷಗಳೂ ಒಂದೇ ಒಂದು ಪಕ್ಷ ಕೂಡ ಎಲ್ಲಾ ಕ್ಷೇತ್ರದಲ್ಲಿ ಮೂವತ್ತರ ಒಳಗಿನವರಿಗೆ ಮಾತ್ರ ಟಿಕೆಟ್ ಕೊಡೋದು ಅಂತ ಘೋಷಿಸಿಲ್ಲ? ನಲವತ್ತು ದಾಟಿದ ಎಲ್ಲಾ ರಾಜಕೀಯ ನಾಯಕರು ನಿವೃತ್ತಿ ತೊಗೊಂಡು ಸುಭದ್ರ ಭಾರತ ನಿರ್ಮಾಣಕ್ಕೆ ಯುವಕರಿಗೆ ಬೆನ್ನೆಲುಬಾಗಿ ಮಾರ್ಗದರ್ಶನ ಮಾಡೋ ಕೆಲಸ ಯಾಕೆ ಮಾಡೋಲ್ಲ? ಎಲ್ಲಾ ಪಕ್ಷಗಳಲ್ಲೂ ಕುಟುಂಬ ರಾಜಕೀಯ ಇದ್ದೇ ಇದೆ. ಇರಲಿ ಏನೋ ಅಮಾಯಕ ಪ್ರಜೆಗಳು ನಾವು ಹೊಟ್ಟೆಗೆ ಹಾಕ್ಕೊತೀವಿ. ಕುಟುಂಬ ರಾಜಕೀಯ ಮಂದಿಗಳು ಕಣ್ಣು ಮಂಜಾಗಿ ಹಾಸಿಗೆ ಹಿಡಿದು ಅರಳು-ಮರಳು ಪರಿಸ್ಥಿತಿಯಲ್ಲೂ ನಿವೃತ್ತಿ ಘೋಷಿಸದೆ ರಾಜಕೀಯದಲ್ಲೇ ಇರ್ತಾರಲ್ಲ ಅವರಿಗೆ ಏನು ಹೇಳ್ತೀಯೋ ಪುಡಾರಿ ??"
ಹೀಗೆ ನಾನು ಕೆಂಡಾಮಂಡಲವಾಗಿ ಎರ್ರಾಬಿರ್ರಿ ಪ್ರಶ್ನೆಗಳ ಸುರಿಮಳೇನೆ ಸುರಿಸ್ತಾ ಇದ್ರೆ, ಪಾಪ ನಮ್ ಪುಡಾರಿ "ಅಣ್ಣಾ ಸಾಕು ಬಿಡೋ ತಪ್ಪಾಯ್ತು, ಏನೋ ತಿಳಿದೇ ನಿಮ್ ದೇವರ ಬಗ್ಗೆ ತಪ್ಪು ಹೇಳಿದೆ" ಅಂತ ಅಲವತ್ತು ಕೊಳ್ತಾ ಇದ್ರೆ ನಾನು " ಪುಡಾರಿ ಇಷ್ಟೂತ್ತು ಮಾತಾಡಿ ನನ್ನ ಕೆರಳಿಸಿದ್ದು ಅಲ್ದೆ ಇವಾಗ ಅಣ್ಣ ಅಂತ ಅಂಗಲಾಚ್ತಾ ಇದ್ದೀಯ? ಅಂತೂ ಇಂತೂ ನೀನೂ ಕಲ್ತು ಬಿಟ್ಟೆ ರಾಜಕೀಯದ ಟ್ರಿಕ್ಸ್ ಅಲ್ವ? ಈಗ ನಮ್ಮ ವಿಷಯಕ್ಕೆ ಬಾ.. ನಮ್ಮಂತ ಯುವಕರಿಗೆ ಯಾಕೆ ನಿಮ್ಮ ಕ್ಷೇತ್ರದಲ್ಲಿ ನೆಲೆ ಇಲ್ಲ ? ದೇಶದ ಎಪ್ಪತ್ತು ಶೇಕಡಾ ಯುವಕರಿದ್ರೂ ರಾಜಕೀಯದಲ್ಲಿ ಮಾತ್ರ ಯಾಕೆ ಎಲ್ಲಾ ಮುದುಕರೇ ತುಂಬಿ ತುಳುಕಾಡುತ್ತಿದ್ದಾರೆ? ಅದೇನೋ ಕಾರ್ಯಕರ್ತ ಅದು ಇದು ಅಂತ ಸಿಕ್ಕ ಸಿಕ್ಕ ಎಲ್ಲಾ ಪಾರ್ಟೀ ಅವರ ಹತ್ರಾನು ದುಡ್ಡು ಇಸ್ಕೊಂಡು ಪ್ರಚಾರ ಅಂತೆಲ್ಲ ಏನೇನೋ ಮಾಡ್ತಾ ಸಿಕ್ಸಿಕ್ಕಿದ್ದು ಕುಡಿತಾ ಎಲ್ಲೆಲ್ಲೊ ಸುತ್ತಾಡ್ತಾ ಇರ್ತಿಯಲ್ಲ? ಮಾಡೋಕೇನೂ ಕ್ಯಾಮೆ ಇಲ್ಲಾಂದ್ರೆ ನೀನೆ ಯಾಕೆ ಯಾವ್ದಾದ್ರು ಪಕ್ಷದಿಂದ ಟಿಕೆಟ್ ಗಿಟ್ಟಿಸಿ ನಿಂತು ಒಂದು ಕೈ ನೋಡಬಾರದು? ನೀನೂ ಇನ್ನೂ ಎಳೇ ಯುವಕ ಅಲ್ಲವ?" ಅಂದೇ..
ಪುಡಾರಿಯ ಅಂದು ಮೊದಲ ಬಾರಿಗೆ ವಿಷಾದದಿಂದ ಹೇಳತೊಡಗಿದ, "ಹುಮ್ಮ್ ನಮ್ಮನ್ನೆಲ್ಲ ಪಕ್ಷದವರೂ ತಮ್ಮ ಕೆಲಸ ಆಗೋ ವರೆಗೆ ಮಾತ್ರ ಚೆನ್ನಾಗಿ ನೋಡ್ಕೊಳೋದು ಕುಡಿಸೋದು ಮಾಡಿದ್ರು, ಆಮೇಲೆ ಕ್ಯಾರೆ ಅನ್ನಲಿಲ್ಲ. ಇವರ ಎಲ್ಲಾ ಕೆಲಸಕ್ಕೂ ನಮ್ಮಂಥ ಯುವಕರು ಬೇಕು, ಆಮೇಲೆ ಬರೀ ಭಾಷಣಕ್ಕೆ ಅಷ್ಟೇ ಸೀಮಿತ ನಾವು. ನೀನು ಹೇಳಿದ ಹಾಗೇ ರಾಜಕೀಯಕ್ಕೂ ಒಂದು ಪ್ರತ್ಯೇಕ ಮಾನದಂಡ ಇರಬೇಕಿತ್ತು ಮಗಾ. ಮುದುಕರನ್ನ ಬರೀ ಸಲಹೆಗಾರರನ್ನಾಗಿ ಮಾತ್ರ ಇಟ್ಕೊಲ್ಲೋ ಹಾಗಿರಬೇಕಿತ್ತು. ಕೇವಲ ಮೂವತ್ತೈದು ವರ್ಷ ಒಳಗಿನ ಯುವಕರಿಂದ ಮಾತ್ರ ರಾಜಕೀಯ ಪ್ರವೇಶ ಅನ್ನೋ ತರ ಕಾಯ್ದೆ ಇರಬೇಕಿತ್ತು ಅಂತ ಅನ್ನಿಸ್ತಿದೆ. ಬದಲಾವಣೆ ಯುವಕರಿಂದ ಮಾತ್ರ ಸಾಧ್ಯಾ ಅನ್ನೋ ಮುತ್ಸದ್ದಿಗಳು ಕೊನೆಗೆ ಐವತ್ತಾಗಿದ್ರೂ ನಾನೇ ಚಿರ ಯುವಕಾ ಅನ್ನೋರಿಗೆ ಏನ್ ಮಾಡೋಣ?? ಇಂತಾ ಕೊಳೆನೆಲ್ಲಾ, ಕಾಲ ಅನ್ನೋ ಕಾದ ಕಬ್ಬಿಣದ ಕೋಲೇ ಕೋಳಾ ತೊಡಿಸಿ ಕೊಳಕಾಗಿರೋ ಕೊಳಚೆನಾ ಕೊಲಾಯಿಯಲ್ಲಿಯೇ ಕೊಳೆತು ಹೋಗೋ ತರ ಮಾಡಿದ್ರೆ ಮಾತ್ರ ಏನಾದರೂ ಬದಲಾವಣೆ ಸಾಧ್ಯ." ಎಂದ ಅರ್ಥವಾಗದೆ ಇರೋ ಹಾಗೇ ಮಾರ್ಮಿಕವಾಗಿ..!!
ಅಂತೂ ನಮ್ಮಂಥ ಎಳೇ ಯುವಕರಿಗೂ ರಾಜಕೀಯ ಅರಿವಿದೆ ಆದರೂ ವ್ಯವಸ್ತೆಯ ವ್ಯವಸ್ತಿತ ವಾಸ್ತವ್ಯದಲ್ಲಿ ಅಸ್ತವ್ಯಸ್ತವಾಗಿದೆ ಎಂದು ಅರಿವಾಗಿ ಯೋಚಿಸುವಷ್ಟರಲ್ಲಿ ನಮ್ಮ ಭಾರತವು ಕಾಂಗರೂಗಳ ಗರ್ವಭಂಗ ಮಾಡಿ ಬೀಗುತ್ತಿದ್ದರೆ ಅತ್ತ ಕೆಲ ಹಿರಿ ತಲೆಗಳು ಪಿಚ್ ಕಾರಣ ಅದೃಷ್ಟ ಅದೂ ಇದೂ ಅಂತ ವ್ಯಂಗ್ಯ ಮಾಡುತ್ತಿದ್ದರೆ, ನಮ್ ಜನ'ಗೋಳೇ' ಇಷ್ಟು ಬಾ ಮಗಾ ಏನಾದ್ರು ಬೀದಿ ಬದೀದು ತಿನ್ಕೊಂಡು ಬರುವ ಅಂತ ಪುಡಾರಿ ಹೆಗಲ ಮೇಲೆ ಕೈ ಹಾಕಿ ಹೊರಟೆ..!!