Saturday 28 March 2015

ಚಚ್ಚಿ ಲೈನು

ಸೇಡು

ಬಿರಿಮರದ ಬುಡದ
ಬೊಡ್ಡೆಗೇ ಬೆಂಕಿಯಿತ್ತು
ಅದರ ಕಾವಲ್ಲೇ
ಸುಖ ಪಡೆದ ಮನುಜ
ಮುಂದೊಂದು ದಿನದಲ್ಲಿ
ಬಿರುಬೇಸಿಗೆಯ ಧಗೆಗೆ
ಬಸವಳಿದು,
ಮರದ ನೆರಳಿಲ್ಲದೆ
ಅದೇ ಜಾಗದಲ್ಲಿ ನೆಲಕಚ್ಚಿದ..!
ಆ ಮರದ ಅರೆಬೆಂದ ಅವಶೇಷ
ಕಲೆಯಾದ ಕರಿಬೂದಿ
ಅವನ ದಾಷ್ಟ್ಯತೆಗೆ ಪ್ರತಿಕಾರವಾಗಿತ್ತು..
ಭೂತಾಯಿಯ ಕಣ್ಣಲ್ಲಿ ಬತ್ತುತ್ತಿದ್ದ ನೀರಿತ್ತು..!!

No comments:

Post a Comment