Saturday 28 March 2015

Some ಮಾತು

ಮಕ್ಕಳ ಪರೀಕ್ಷಾ ಭಯಕ್ಕೆ ಕಾರಣರಾರು?

ಈ ಮಾರ್ಚ್ ತಿಂಗಳು ಬಂತೂ ಅಂದ್ರೆ ಬಹುತೇಕ ವಿದ್ಯಾರ್ಥಿಗಳಿಗೆ ಒಂಥರಾ ತಳಮಳ, ಇತ್ತ ಕಷ್ಟ ಹೇಳಿಕೊಳ್ಳಲಾರದ, ಅತ್ತ ಸುಖ ಅನುಭವಿಸಲಾರದ ವಿಚಿತ್ರ ಪರಿಸ್ಥಿತಿಯಲ್ಲಿ ಒದ್ದಾಡ್ತಾ ಇತರ್ಾರೆ. ವರ್ಷದ ಪರೀಕ್ಷೆಗಳ ಕೊನೆ ಘಟ್ಟದ ಸಮಯವದು. ಇನ್ನೇನು ಎಕ್ಸಾಮ್ ಎಲ್ಲಾ ಮುಗಿಸಿ ಮುಂದಿನ ರಜಾ ತಯಾರಿ ಮಾಡೋ ಯೋಚನೆ, ಮುಂದಿನ ತರಗತಿಗಳ ಬಗ್ಗೆ ಅವರದೇ ಆದ ಕಲ್ಪನೆಗಳು ಒಂದೆಡೆಯಾದ್ರೆ ಇದೇ ಮಾಚರ್್ ಅಲ್ಲಿ ಬರುವ, ಉತ್ಸವಗಳು, ಜಾತ್ರೆಗಳು, ಸಾಲು ಸಾಲು ಸಮಾರಂಭಗಳು ಜೊತೆಗೆ ವಿಶ್ವಕಪ್ ಕ್ರಿಕೇಟ್ ಮ್ಯಾಚುಗಳೂ ಒಂದಾ ಎರಡಾ..! ಇಷ್ಟು ಸಾಕಲ್ವಾ ಹಲವಾರು ಮಕ್ಕಳ ಚಿತ್ತ ಕಲಕಿ ತೋಳಲಾಟದಲ್ಲಿಯೇ ತೇಲಾಡಿಸೋಕೆ!?
ಎಕ್ಸಾಮ್ ಫೋಬಿಯಾ ಅಥವಾ ಪರೀಕ್ಷಾ ಜ್ವರಕ್ಕೆ ಬಹಳಷ್ಟು ಮಕ್ಕಳು ಬಲಿಯಾಗ್ತಾ ಇದ್ದಾರೆ. ಪರೀಕ್ಷೆ ಎಂದರೆ ಅದೊಂದು ದೊಡ್ಡ ಮಾರಣಾಂತಿಕ ಕ್ರಿಯೆ. ಫೇಲಾದ್ರೆ ಆಗೋ ಅವಮಾನ ಎದುರಿಸಲಾರದಷ್ಟು ಭಯಾನಕ ಅಂತೆಲ್ಲಾ ಎಣಿಸಿ ಸಾವಿಗೆ ಶರಣಾಗುವ ಮಕ್ಕಳ ಸಂಖ್ಯೆ ಗಣನೀಯವಾಗಿ ಏರುತ್ತಿದೆ. ಇದಕ್ಕೆ ಮಕ್ಕಳ ಅಮಾಯಕತೆ ಎಷ್ಟು ಕಾರಣವೋ ಅದಕ್ಕಿಂತಲೂ ಅತಿಯಾದ ನಿರೀಕ್ಷೆ ಇಟ್ಟ ಪಾಲಕರದ್ದೂ ಆಗಿರ್ತದೆೆ. ಪರೀಕ್ಷೆ ಸಮಯದ ಸ್ವಲ್ಪ ಮಟ್ಟಿಗಿನ ಆತಂಕ ಒಳ್ಳೆಯದೇ ಎನ್ನುತ್ತಾರೆ ಮನೋ ವೈದ್ಯರು! ಅದು ಮಕ್ಕಳ ನಿರ್ವಹಣೆಯನ್ನು ಉತ್ತಮಗೊಳಿಸುತ್ತಂತೆ. ಸಮಯವನ್ನು ಹಾಳು ಮಾಡದೆ, ವಿಧೇಯರಾಗಿ ಓದಿಕೊಳ್ಳುವುದರಿಂದ ಪರೀಕ್ಷೆಗಳಲ್ಲಿ ವಿದ್ಯಾಥರ್ಿಗಳ ನಿರ್ವಹಣೆ ಮಟ್ಟ ಹೆಚ್ಚತ್ತೆ. ಆದರೆ ಪರೀಕ್ಷೆಗಳ ಬಗ್ಗೆ ಅಗತ್ಯಕ್ಕಿಂತ ಹೆಚ್ಚಿನ ಭಯವಿದ್ರೆ ಮಾತ್ರ ಪರೀಕ್ಷೆಯ ಮೇಲೂ ಹಾಗೂ ಮಕ್ಕಳ ಮೇಲೂ ತುಂಬಾ ಕೆಟ್ಟ ಪರಿಣಾಮ ಬೀರೋದ್ರಲ್ಲಿ ಸಂಶಯವೇ ಇಲ್ಲ. ಕೆಲವು ಮಕ್ಕಳಂತೂ ಸಧ್ಯದಲ್ಲೇ ಎದುರಿಸಲಿರುವ ಪರೀಕ್ಷೆಯ ಬಗ್ಗೆ ಕಿರಿಕಿರಿ ಮತ್ತು ಒಂದು ರೀತಿಯ ನಿಗೂಢ ಭಯ ಹೊಂದಿರುತ್ತಾರೆ. ಪರೀಕ್ಷೆಯ ಬಗೆಗಿನ ಈ ಹೆಚ್ಚುವರಿ ಆತಂಕವೇ ಎಕ್ಸಾಮ್ ಫೋಬಿಯಾ ಅಥವಾ ಪರೀಕ್ಷಾ ಭಯ.
ಈ ಭಯದ ಲಕ್ಷಣವೇ ಒಂಥರಾ ವಿಲಕ್ಷಣ, ವಿಚಿತ್ರ. ಅದು ಸಾಧಾರಣದಿಂದ ತೀವ್ರತರದಲ್ಲಿರುತ್ತವೆ. ಕೆಲವು ಮಕ್ಕಳಲ್ಲಿ ಪರೀಕ್ಷಾ ಭಯ ಸ್ವಲ್ಪ ಮಟ್ಟಿಗಿದ್ದಿದ್ದರೂ ಪರೀಕ್ಷೆಯಲ್ಲಿ ಚೆನ್ನಾಗಿಯೇ ಮಾಡಿರುತ್ತಾರೆ. ಇನ್ನು ಕೆಲವರಲ್ಲಿ ಆ ಸಾಮಥ್ರ್ಯ ಕಡಿಮೆ ಇದ್ದಲ್ಲಿ ಬೆವರುವುದು, ಕಂಪಿಸುವುದು, ಎದೆ ಜೊರಾಗಿ ಹೊಡೆದುಕೊಳ್ಳುವುದು, ಬಾಯಿ ಒಣಗುವುದು, ಪರೀಕ್ಷಾ ಕೊಠಡಿಯಲ್ಲಿಯೇ ತಲೆಸುತ್ತಿ ಬೀಳುವುದು ಇತ್ಯಾದಿಗಳಾಗುವ ಸಂಭವವೂ ಇದೆ. ಇನ್ನು ಕೆಲವು ಪ್ರಕರಣಗಳಲ್ಲಿ ಇಂತಹ ದೈಹಿಕ ತೊಂದರೆಗಳು ಕಾಣಿಸಿಕೊಳ್ಳದಿದ್ದರೂ ಉತ್ತರಗಳು ಮರೆತು ಹೋಗುವುದು, ಗೊಂದಲದಲ್ಲಿ ಬೀಳುವುದು ಮುಂತಾದವುಗಳು ಕಾಣಿಸಿಕೊಳ್ಳುತ್ತವೆ. ಹೀಗೆ ಹೊಟ್ಟೆಯಲ್ಲಿ ಚಿಟ್ಟೆ ಬಿಟ್ಟಂತಾಗುವ ಪರಿಸ್ಥಿತಿಯನ್ನು ಮಕ್ಕಳು ಹೇಗೆ ಎದುರಿಸಬೇಕು ಅಂತಾ ತಿಳಿಸಿಕೊಡುವ ಜವಾಬ್ದಾರಿ ಪಾಲಕ ಮತ್ತು ಶಿಕ್ಷಕ ವರ್ಗದವರ ಮೇಲಿದೆ. ಯಾಕೆಂದರೆ ಖಿನ್ನತೆಯಿಂದ ನರಳುತ್ತಿರುವವರನ್ನು ವೈದ್ಯರಿಗಿಂತಲೂ ಹೆಚ್ಚಾಗಿ ಸರಿಪಡಿಸಬಲ್ಲವರು ಪಾಲಕರು ಮತ್ತು ಶಿಕ್ಷಕರು.
ಹಾಗಿದ್ರೆ ಪಾಲಕರು ಹಾಗೂ ಶಿಕ್ಷಕರು ಏನು ಮಾಡಬಹುದು? ಮಕ್ಕಳ ಜೊತೆ ಸ್ನೇಹಿತರಂತೆ ಸಲಹೆ ನೀಡಬಹುದು. ತಮ್ಮ ಅನುಭವಗಳನ್ನು ಹೇಳಿ, ಪರಿಸ್ಥಿತಿ ಎದುರಿಸುವುದು ಹೇಗೆ ಅನ್ನೋದು ತಿಳಿಸಬಹುದು. ಪರೀಕ್ಷೆಯ ಬಗ್ಗೆ ಮಕ್ಕಳಲ್ಲಿರುವ ನಕಾರಾತ್ಮಕತೆಯನ್ನು ಗುರುತಿಸಿ ಅವರ ಬೆಳವಣಿಗೆಗೆ ಪೂರಕವಾಗಿ ಸ್ಪಂದಿಸಿ. ಅವರಲ್ಲಿನ ಧನಾತ್ಮಕತೆಯನ್ನು ಗುರುತಿಸಿ ಅದಕ್ಕೆ ನಿಕ್ಷಲ್ಮಶ ಹೊಗಳಿಕೆ ಅಥವಾ ಸಣ್ಣಪುಟ್ಟ ಬಹುಮಾನ ಕೊಡುವುದರಿಂದ ಉತ್ತೇಜಿಸಬಹುದಲ್ವೇ? ಶಿಸ್ತಿನ ಜೀವನ ನಾವು ಅಳವಡಿಸಿಕೊಂಡ್ರೆ ಅದನ್ನು ಮಕ್ಕಳೂ ಕಲಿತವೆ. ನಾವು ಮೊದಲು ನಮ್ಮ ಬಗ್ಗೆಯೇ ಗಮನ ಕೊಡಬೇಕಾದ ಜರೂರತ್ತಿದೆ. ಮಕ್ಕಳು ಹೊಸತನ್ನೇನಾದರೂ ಮಾಡಲಿ ಅದಕ್ಕೆ ಉತ್ತೇಜನಕಾರಿ ಸೂಕ್ತ ತಿದ್ದುಪಡಿ ಪಾಲಕರು ಮಾಡಲೇಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಇತರ ಮಕ್ಕಳೊಂದಿಗೆ ಹೋಲಿಕೆಯನ್ನಂತೂ ಮಾಡಲೇಬಾರದು. ನಮ್ಮ ನಿರೀಕ್ಷೆಗಳನ್ನು ಮಕ್ಕಳ ಮೇಲೆ ಹೇರುವುದು ಎಷ್ಟು ಸರಿಯಾ? ಶಿಕ್ಷಕರೂ ಕೂಡಾ ಮಕ್ಕಳ ಪರಿಣಾಮಕಾರಿ ಅಭ್ಯಾಸ ಮತ್ತು ಸಂಯೋಜನೆಯ ವಿಧಾನವನ್ನು ಪರೀಕ್ಷೆಗೆ ಸಂಬಂಧಿಸಿದಂತೆ ಏನನ್ನು ಓದಬೇಕು ಮತ್ತು ಹೇಗೆ ಓದಬೇಕು ಅನ್ನೋದನ್ನ ಪ್ರೀತಿಯಿಂದ ಮನಮುಟ್ಟುವಂತೆ ಕಲಿಸಿಕೊಡಬೇಕಿದೆ. ಅಭ್ಯಾಸದ ತಂತ್ರಗಳನ್ನು ಹೇಳಿಕೊಡುವುದರ ಜೊತೆಗೆ ಪ್ರಶ್ನೆ ಮಾಡುವುದನ್ನು ಪ್ರೇರೇಪಿಸಿರಿ. ಟಿಪ್ಪಣಿ ಕೌಶಲ್ಯ, ಸಮಯ ನಿರ್ವಹಣೆಯ ಪಾಠಗಳ ಬಗ್ಗೆ ಶಿಕ್ಷಕರಲ್ಲದೆ ಮತ್ಯಾರು ಪರಿಣಾಮಕಾರಿಯಾಗಿ ವಿವರಿಸಬಲ್ಲರು? ಮಕ್ಕಳು ಖಿನ್ನತೆ ಅಥವಾ ಆತಂಕದಲ್ಲಿದ್ದಂತೆ ಕಂಡು ಬಂದರೆ, ನಿದ್ದೆ, ಹಸಿವು ಕಡಿಮೆ ಮಾಡುತ್ತಿದ್ದರೆ, ಭಾವನಾತ್ಮಕವಾಗಿ ಬಳಲಿದಂತೆ ಕಂಡುಬಂದರೆ ಕೂಡಲೇ ಮಾನಸಿಕ ತಜ್ಞರು ಅಥವಾ ಸಮಾಲೋಚಕರನ್ನು ಭೇಟಿಮಾಡಿಸಿ.
ಪಾಲಕರಾದವರು ಮಕ್ಕಳ ಯಶಸ್ಸಿಗೆ ಜಾಸ್ತಿ ಬೀಗದೆ, ಹಿನ್ನೆಡೆಗೆ ಹೊಡೆದುಬಡಿದು ಮಾಡದೇ ಸಮಾನತೆ ಕಾಯ್ದುಕೊಳ್ಳುವುದು ಕಷ್ಟವಾದರೂ ಮಾಡಲೇಬೇಕು. ಜೀವನ ನಾವಂದುಕೊಂಡಂಗೆ ನಡೆಯೋದು ತುಂಬಾನೇ ವಿರಳ. ನಮ್ಮಿಚ್ಛೆಯಂತೆ ನಮ್ಮ ಮಗು ಉನ್ನತ ಅಂಕಗಳಿಸಿ ಅತ್ಯುತ್ತಮ ಕೆಲಸದಲ್ಲಿದ್ದರೂ, ಜೀವನದಲ್ಲಿ ಸಕಲ ಸವಲತ್ತುಗಳು ಇದ್ದರೂ ಜಿಗುಪ್ಸೆಗೆ ಒಳಗಾಗಬಾರದೆಂದೇನಿಲ್ಲ. ಅಂಕಗಳಿಕೆಯು ಜೀವನದ ಮಾನದಂಡ ಖಂಡಿತವಾಗಿಯೂ ಅಲ್ಲ. ಇಂದು ಪರೀಕ್ಷೆಯಲ್ಲಿ ಸೋತವರು ಜೀವನದಲ್ಲಿ ಗೆಲ್ಲಲಾರರೆಂದು ಖಂಡಿತಾ ಹೇಳಲಾಗದು. ಪರೀಕ್ಷೆಯಲ್ಲಿ ರ್ಯಾಂಕ್ ತಗಂಡೂ ಕೆಲಸಕ್ಕಾಗಿ ಅಲೆಯುತ್ತಿದ್ದವರು ನಮ್ಮಲ್ಲಿ ಕಡಿಮೆಯೇನಿಲ್ಲ. ಪರೀಕ್ಷೆ ಒಂಥರಾ ಆಟದ ತರ. ಆದರೆ ಇಲ್ಲಿನ ಅಂಕದ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳೋದು ಬೇಡ. ಕಷ್ಟಪಟ್ಟರೆ ಯಾವುದಕ್ಕೆ ಯಾಕೆ ಹೆದರಬೇಕು? ಜೀವನಕ್ಕೊಂದು ಕನಸು ಕಟ್ಟಿ ಅದರ ಸಾಧನೆಗಾಗಿ ಕಷ್ಟಪಡಿ. ಸಣ್ಣಪುಟ್ಟ ಗುರಿಗಳನ್ನು ಇಟ್ಟುಕೊಂಡು ಈಡೇರಿಸಿಕೊಳ್ಳುತ್ತಾ ಗಮ್ಯಸಾಧನೆಯತ್ತ ಮುಂದುವರಿಯೋಣ. ಚಿಕ್ಕಪುಟ್ಟ ಕ್ಷಣಗಳಲ್ಲೂ ಸಂತೋಷವಿದೆ. ನೋವನ್ನೂ ಎಂಜಾಯ್ ಮಾಡೋದರ ಬಗ್ಗೆ ಯೋಚಿಸೋಣ. ಭಯಕ್ಕೂ ಭಯಬೀಳಿಸೋತರ ನಾನ್ ಸ್ಟಾಪ್ ನಡಿತಾ ಇರೋಣ ದಾರಿ ಸಿಕ್ಕೇ ಸಿಗತ್ತೆ. ಉತ್ತಮ ಸಮಾಜಕ್ಕಾಗಿ ಮಕ್ಕಳನ್ನ ಬೆಳೆಸೋಣ, ಅಂಕಗಳಿಕೆಗಾಗಿ ಅಲ್ಲ. ಪರೀಕ್ಷೆಯ ಮಹತ್ವ ಕೇವಲ ಭೌದ್ಧಿಕ ಮಟ್ಟ ಸುಧಾರಿಸೋಕೆ ವಿನಃ ಕಡಿಮೆ ಅಂಕಗಳಿಸಿದ ಎಲ್ಲರೂ ಜೀವನ ನಡೆಸಲಾರದ ದಡ್ಡರಂತೂ ಅಲ್ಲವೇ ಅಲ್ಲ.

No comments:

Post a Comment